Advertisement

ತೆಲಂಗಾಣದಲ್ಲಿ ಕಲ್ಲು ಹೊಡೆದು ಟಿಆರ್‌ಎಸ್‌ ನಾಯಕನ ಬರ್ಬರ ಹತ್ಯೆ 

01:44 PM Nov 06, 2018 | Team Udayavani |

ಹೈದರಾಬಾದ್‌: ತೆಲಂಗಾಣದ ವಿಕಾರಾಬಾದ್‌ನಲ್ಲಿ ಟಿಆರ್‌ಎಸ್‌ನ ಪ್ರಭಾವಿ ನಾಯಕ ನಾರಾಯಣ ರೆಡ್ಡಿ ಅವರನ್ನು ಕಲ್ಲು ಹೊಡೆದು ಬರ್ಬರವಾಗಿ ಹತ್ಯೆಗೈಯಲಾಗಿದೆ. ಘಟನೆ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. 

Advertisement

ಮಂಗಳವಾರ ಬೆಳಗ್ಗೆ ಸುಲ್ತಾನ್‌ ಪುರ್‌ನಲ್ಲಿ ನಾರಾಯಣ ರೆಡ್ಡಿ ಶವವಾಗಿ ಪತ್ತೆಯಾಗಿದ್ದಾರೆ. ಗ್ಯಾಂಗ್‌ವೊಂದರೊಂದಿಗೆ ರೆಡ್ಡಿ ಅವರು ದ್ವೇಷ ಹೊಂದಿದ್ದರು ಎಂದು ತಿಳಿದು ಬಂದಿದೆ.

ಘಟನೆ ಬಳಿಕ ಟಿಆರ್‌ಎಸ್‌ ಕಾರ್ಯಕರ್ತರು ರೊಚ್ಚಿಗೆದ್ದಿದ್ದು, ಕೆಲವರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ್ದಾರೆ.

ಸ್ಥಳದಲ್ಲಿ ವ್ಯಾಪಕ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದ್ದು, ಇದು ರಾಜಕೀಯ ದ್ವೇಷದಲ್ಲಿ ನಡೆದ ಹತ್ಯೆ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next