Advertisement
ಹೊಯ್ಸಳ ಶೈಲಿಯ ವಾಸ್ತುಶಿಲ್ಪ ಹೊಂದಿರುವ ಚೆನ್ನಕೇಶವ ದೇವಸ್ಥಾನದ ಒಳಾವರಣದಲ್ಲಿ ತೆಲುಗು ಸಿನಿಮಾ ದೂವಾಡ ಜಗನ್ನಾಥ್ (ಡಿಜೆ) ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ತಂಡದವರು ಕೇಂದ್ರ ಪುರಾತತ್ವ ಇಲಾಖೆಯ ಮುಖ್ಯಕಚೇರಿ ಇರುವ ದೆಹಲಿಯಿಂದಲೇ ಚಿತ್ರೀಕರಣಕ್ಕೆ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಚಿತ್ರೀಕರಣ ತಂಡದವರು ದೇವಸ್ಥಾನದ ಒಳಾವರಣದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.
Related Articles
Advertisement
ದೇವಾಲಯದಲ್ಲಿ ಚಿತ್ರೀಕರಣ ಮಾಡುವಾಗ ಸಾರ್ವಜನಿಕರಿಗೆ ಸಮಸ್ಯೆ ಬಾರದ ರೀತಿ ಚಿತ್ರೀಕರಿಸಬೇಕು. ಅನುಮತಿ ಸಿಕ್ಕಿದೆ ಎಂದು ಜನರನ್ನು ದೇವಸ್ಥಾನದೊಳಕ್ಕೆ ಬಿಡದಂತೆ ಶೋಷಣೆ ಮಾಡುವುದು ತಪ್ಪು. ಈ ಹಿಂದೆ ದೇವಾಲಯದ ಒಳಗೆ ಹೊಯ್ಸಳ ಉತ್ಸವ ಮಾಡಲು ಇದೇ ಪುರಾತತ್ವ ಇಲಾಖೆ ಅನುಮತಿ ನೀಡದ್ದರಿಂದ ದೇವಾಲಯದ ಹೊರಭಾಗದಲ್ಲಿ ಉತ್ಸವ ನಡೆಸಲಾಗಿತ್ತು. ಸ್ಥಳೀಯರಿಗೆ ಅವಕಾಶ ನೀಡದ ಇಲಾಖೆ ಹೊರಗಿನವರಿಗೆ ಚಿತ್ರೀಕರಣಕ್ಕೆ ಯಾಕೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದರು.
ಸಾರ್ವಜನಿಕರ ಅಸಮಾಧಾನದ ಮಾಹಿತಿ ಪಡೆದ ಬೇಲೂರು ವೃತ್ತ ನಿರೀಕ್ಷಕ ಲೋಕೇಶ್ ಚಿತ್ರ ತಂಡದ ಮುಖ್ಯಸ್ಥರ ಜೊತೆ ಮಾತನಾಡಿ, ಸಾರ್ವಜನಿಕರಿಗೆ ಭಕ್ತಾಧಿಗಳಿಗೆ ಮತ್ತು ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಚಿತ್ರೀಕರಿಸಬೇಕು ಎಂದು ಸೂಚನೆ ನೀಡಿದರು. ಈ ದೇವಾಲಯದ ಉಸ್ತುವಾರಿಯನ್ನು ಮುಜರಾಯಿ ಮತ್ತು ಪುರತತ್ವ ಎರಡು ಇಲಾಖೆಗಳು ನಿರ್ವಹಿಸುತ್ತಿವೆ ದೇವರ ಪೂಜೆ ಕೈಂಕರ್ಯ ಮತ್ತು
ಆಡಳಿತವನ್ನು ಮುಜಾರಾಯಿ ಇಲಾಕೆ ನೋಡಿಕೊಂಡರೆ ದೇವಾಲಯದ ವಾಸ್ತುಶಿಲ್ಪಿಕಲೆಗಳ ರಕ್ಷಣೆಯನ್ನು ಪುರತತ್ವ ಇಲಾಖೆ ನೋಡಿಕೊಳ್ಳುತ್ತಿದೆ ಇದರಿಂದ ಸಾರ್ವಜನಿಕರಿಗೆ ತೀವ್ರ ಗೊಂದಲವಿದ್ದು ಸಮಸ್ಯೆಗಳನ್ನು ಯಾರ ಹತ್ತಿರ ಹೇಳಿಕೊಳ್ಳುವುದು ಎನ್ನುವುದೆ ಇಲ್ಲಿನ ಸಮಸ್ಯೆಯಾಗಿದ್ದು ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಸುಂದರ ದೇವಾಲಯವನ್ನು ಬೇಕಾ ಬಿಟ್ಟಿ ಉಪಯೋಗಿಸದೆ ಇಲಾಖೆಗೆಳು ದೇವಾಲಯವನ್ನು ಸಂರಕ್ಷಿಸಲು ಮುಂದಾಗುವುದು ಅಗತ್ಯವಾಗಿದೆ.
ದೂರವಾಣಿ ಮೂಲಕ ಉದಯವಾಣಿಯೊಂದಿಗೆ ಮಾತನಾಡಿದ ಕೇಂದ್ರ ಪುರಾತತ್ವ ಇಲಾಖೆಯ ಜೂನಿಯರ್ ಕನ್ಸ್ರ್ವೆàಟರ್ ಕಾಮತ್, ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡದವರು ದೆಹಲಿಯಲ್ಲಿಯೇ ಅನುಮತಿ ಪಡೆದುಕೊಂಡು ಬಂದಿದ್ದಾರೆ. 7 ದಿನ ಚಿತ್ರೀಕರಣ ನಡೆಯಲಿದ್ದು, ಪ್ರತಿ ದಿನ 50 ಸಾವಿರ ರೂ.ನಂತೆ ಚಿತ್ರೀಕರಣ ತಂಡ ಹಣ ಪಾವತಿಸುತ್ತಿದೆ.ಚಿತ್ರೀಕರಣಕ್ಕೆ ಅನುಮತಿ ನೀಡುವಾಗ ಪ್ರವಾಸಿಗರಿಗೆ ಅಡ್ಡಿಯನ್ನುಂಟು ಮಾಡಬಾರದು, ಅಂದಗೆಡಿಸಬಾರದು ಮುಂತಾದ ನಿರ್ಬಂಧಗಳನ್ನು ಹಾಕಿರಲಾಗುತ್ತದೆ. ನಿರ್ಬಂಧವನ್ನು ಉಲ್ಲಂ ಸಿದರೆ ಆ ಬಗ್ಗೆ ವರದಿ ಕಳುಹಿಸಲಾಗುವುದು. ಅವರೇ ಮುಂದಿನ ಕ್ರಮ ಜರುಗಿಸಲಿದ್ದಾರೆ.
ಪುರಾತತ್ವ ಇಲಾಖೆ ಕೇವಲ ಹಣ ಮಾಡುವ ಉದ್ದೇಶ ಹೊಂದಬಾರದು. ನಾಡಿನ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಹೊಯ್ಸಳರ ಕಾಲದ ಗತವೈಭವವನ್ನು ಸಾರುವ ದೇವಾಲಯದ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸರ್ಕಾರ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ದೇವಾಲಯವನ್ನು ನೀಡಿದರೆ ಸಂಘಟನೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.-ಐ.ಎನ್.ಅರುಣಕುಮಾರ್, ತಾಲೂಕಾಧ್ಯಕ್ಷ, ಜಯಕರ್ನಾಟಕ ಸಂಘಟನೆ ದೇವಸ್ಥಾನದಲ್ಲಿ ಚಿತ್ರೀಕರಣ ನಡೆಸುವ ಬಗ್ಗೆ ಇಲ್ಲಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದಿದ್ದರೆ ಸಾಕು. ಆ ಅನುಮತಿ ಆಧಾರದಲ್ಲಿ ಭದ್ರತೆ ನೀಡುವಂತೆ ಸ್ಥಳೀಯ ಪೊಲೀಸರಿಗೆ ಚಿತ್ರತಂಡದವರು ಮನವಿ ಸಲ್ಲಿಸಿ ಅಗತ್ಯ ಹಣ ಪಾವತಿಸಿದರೆ ಭದ್ರತೆ ನೀಡಲಾಗುವುದು. ಚಿತ್ರೀಕರಣದ ವೇಳೆ ಇತರೆ ಸಮಸ್ಯೆಯಾದರೆ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ.
-ರಾಹುಲ್ ಶಹಾಪುರ್ವಾಡ್, ಎಸ್ಪಿ