Advertisement

ಇನ್ನೂ 3 ರಾಜ್ಯ ಗೆದ್ದಾಗ ಬಿಜೆಪಿಗೆ ಸುವರ್ಣ ಯುಗ: ಅಮಿತ್‌ ಶಾ

05:24 PM Mar 03, 2018 | udayavani editorial |

ಹೊಸದಿಲ್ಲಿ : ತ್ರಿಪುರ ಮತ್ತು ನಾಗಾಲ್ಯಾಂಡ್‌ ನಲ್ಲಿನ ಬಿಜೆಪಿ ವಿಜಯವು ಈಶಾನ್ಯ ಭಾಗದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ವರ್ಣಿಸಿದ್ದಾರೆ. 

Advertisement

ಪಶ್ಚಿಮ ಬಂಗಾಲ, ಒಡಿಶಾ ಮತ್ತು ಕರ್ನಾಟಕವನ್ನು ಎದುರಾಳಿ ಪಕ್ಷಗಳಿಂದ ಬಿಜೆಪಿ ಗೆದ್ದುಕೊಂಡಾಗಲೇ ಅದು ಬಿಜೆಪಿಯ ಸುವರ್ಣಯುಗ ಎನಿಸುವುದು ಎಂದವರು ಹೇಳಿದರು. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ತೋರಿರುವ ಉತ್ತಮ ನಿರ್ವಹಣೆಯಿಂದ ಆನಂದ ತುಂದಿಲರಾಗಿದ್ದ ಅವರು ಈ ಪ್ರತಿಕ್ರಿಯೆ ನೀಡಿದರು. 

ನನಗೆ ಮತ್ತು ಬಿಜೆಪಿಯ ಸಮಸ್ತ ಕಾರ್ಯಕರ್ತರಿಗೆ ಇವತ್ತು ಅತ್ಯಂತ ಆನಂದದ ದಿನವಾಗಿದೆ. ಬಿಜೆಪಿಯ ವಿಜಯ ಅನೇಕ ಕಾರಣಗಳಿಂದಾಗಿ ಮುಖ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈಶಾನ್ಯ ಭಾಗದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡಿರುವುದೇ ಆಗಿದೆ ಎಂದು ಶಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next