Advertisement

ತಲಾಖ್‌: ಉತ್ತಮ ಸಲಹೆ ಇದ್ದರೆ ಸ್ವೀಕರಿಸಲು ಸಿದ್ಧ

09:50 AM Jan 08, 2018 | Karthik A |

ಹೊಸದಿಲ್ಲಿ /ಲಕ್ನೋ: ತ್ರಿವಳಿ ತಲಾಖ್‌ ವಿಧೇಯಕಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಅಥವಾ ಇತರೆ ಪಕ್ಷಗಳಿಂದ ಯಾವುದೇ ರಚನಾತ್ಮಕ ಸಲಹೆಯನ್ನು ಸ್ವೀಕರಿಸಲು ಸರಕಾರ ಸಿದ್ಧವಿದೆ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಲೋಕಸಭೆಯಲ್ಲಿ ಅಂಗೀಕಾರಗೊಂಡ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ವಿಪಕ್ಷಗಳು ಅಡ್ಡಿಪಡಿಸಿದ್ದರಿಂದ ಅದು ಅಂಗೀಕಾರವಾಗದೇ ಉಳಿದ ಹಿನ್ನೆಲೆಯಲ್ಲಿ ಸಚಿವ ಪ್ರಸಾದ್‌ ಈ ಮಾತುಗಳನ್ನಾಡಿದ್ದಾರೆ. “ವಿಪಕ್ಷಗಳ ರಚನಾತ್ಮಕ ಸಲಹೆ ಸ್ವೀಕರಿಸುತ್ತೇವೆ. ಆದರೆ, ಅದು ವಿಧೇಯಕದ ಮೂಲ ಆಶಯಕ್ಕೆ ಧಕ್ಕೆ ತರುವಂತಿದ್ದರೆ ಅಥವಾ ತ್ರಿವಳಿ ತಲಾಖ್‌ ಅನ್ನು ಕ್ರಿಮಿನಲ್‌ ಅಲ್ಲ ಎಂದು ತಿದ್ದುಪಡಿ ಮಾಡುವಂತೆ ಸೂಚಿಸಿದರೆ ಅದನ್ನು ಒಪ್ಪುವುದಿಲ್ಲ’ ಎಂದು ರವಿವಾರ ತಿಳಿಸಿದ್ದಾರೆ.

Advertisement

ಇದೇ ಸಂದರ್ಭದಲ್ಲಿ, ಶಾ ಬಾನೋ ಪ್ರಕರಣವನ್ನು ಪ್ರಸ್ತಾವಿಸಿದ ಸಚಿವ ಪ್ರಸಾದ್‌, “ಮತ ಬ್ಯಾಂಕ್‌ ರಾಜಕೀಯ ಮಾಡುವುದನ್ನು ಬಿಟ್ಟು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರೇ ಮಧ್ಯಪ್ರವೇಶಿಸಿ, ಈ ಐತಿಹಾಸಿಕ ಬದಲಾವಣೆಗೆ ಮುನ್ನುಡಿ ಬರೆಯಬೇಕು. ತಮ್ಮ ಪತಿ(ರಾಜೀವ್‌ ಗಾಂಧಿ) ಮಾಡಿದ ಪಾಪವನ್ನು ತೊಳೆಯಲು ಇದು ಅವರಿಗೆ ಸುವರ್ಣಾವಕಾಶ’ ಎಂದೂ ಹೇಳಿದರು. ಕಾಂಗ್ರೆಸ್‌ನವರಿಗೆ ಮುಸ್ಲಿಮರು ಮತಕ್ಕೆ ಬೇಕೇ ಹೊರತು, ಆ ಸಮುದಾಯದಲ್ಲಿ ಲಿಂಗ ಸಮಾನತೆ ತರುವುದನ್ನು ಆ ಪಕ್ಷ ಬಯಸುತ್ತಿಲ್ಲ ಎಂದೂ ವಾಗ್ಧಾಳಿ ನಡೆಸಿದರು.

ಒಂದೇ ದಿನ ಎರಡು ತ್ರಿವಳಿ ತಲಾಖ್‌
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಉತ್ತರಪ್ರದೇಶದಲ್ಲಿ ಒಂದೇ ದಿನ 2 ತ್ರಿವಳಿ ತಲಾಖ್‌ ಪ್ರಕರಣಗಳು ನಡೆದಿವೆ. ಸೌದಿ ಅರೇಬಿಯಾದಲ್ಲಿರುವ ವ್ಯಕ್ತಿಯೊಬ್ಬ ಎಸ್ಸೆಮ್ಮೆಸ್‌ ಮೂಲಕ ತನ್ನ ಪತ್ನಿಗೆ ತಲಾಖ್‌ ಹೇಳಿದ್ದರೆ, ಮತ್ತೂಬ್ಬ ವ್ಯಕ್ತಿ ಫೋನ್‌ ಕರೆಯ ಮೂಲಕ ತ್ರಿವಳಿ ತಲಾಖ್‌ ಹೇಳಿ ವಿಚ್ಛೇದನ ನೀಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next