Advertisement

ಪ್ರಧಾನಿಗೆ ರಾಖಿ ಕಟ್ಟಲಿರುವ ತಲಾಖ್‌ ಹೋರಾಟಗಾರ್ತಿ

01:31 AM Aug 15, 2019 | mahesh |

ಹೊಸದಿಲ್ಲಿ: ತ್ರಿವಳಿ ತಲಾಖ್‌ ವಿರುದ್ಧ ಹೋರಾಟದ ಮುಂಚೂಣಿಯಲ್ಲಿದ್ದ ಇಶ್ರತ್‌ ಜಹಾನ್‌ ಆ. 15ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖೀ ಕಟ್ಟಲಿದ್ದಾರೆ. ಅದಕ್ಕಾಗಿ ಅವರು ಈಗಾಗಲೇ ಹೊಸದಿಲ್ಲಿ ತಲುಪಿದ್ದಾರೆ. ಈ ಬಗ್ಗೆ ಖುಷಿಯಿಂದ ಪ್ರತಿಕ್ರಿಯೆ ನೀಡಿದ ಅವರು ‘ಪ್ರಧಾನಮಂತ್ರಿಯವರಿಗೆ ರಾಖೀ ಕಟ್ಟುವ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆಯನ್ನೇ ಮಾಡಿರಲಿಲ್ಲ. ಬಿಜೆಪಿಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ಫೋನ್‌ ಮಾಡಿ ಮಾಹಿತಿ ನೀಡಿದಾಗ ಅಚ್ಚರಿ ಉಂಟಾಯಿತು’ ಎಂದಿದ್ದಾರೆ. ಈ ಬಾರಿ ರಕ್ಷಾ ಬಂಧನ ಮತ್ತು ಸ್ವಾತಂತ್ರ್ಯ ದಿನ ಒಂದೇ ದಿನ ಆಚರಿಸಲಾಗುತ್ತಿದೆ. ಪ್ರಧಾನಿಗೆ ಉಡುಗೊರೆಯಾಗಿ ಇಶ್ರತ್‌ ಜಹಾನ್‌ ರಸಗುಲ್ಲಾಗಳನ್ನು ನೀಡಲು ನಿರ್ಧರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next