Advertisement

ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್‌: ಬಿಜೆಪಿ, ಕಾಂಗ್ರೆಸ್‌ ವಾಕ್ಸಮರ

04:00 PM Jan 03, 2018 | Team Udayavani |

ಹೊಸದಿಲ್ಲಿ : ರಾಜ್ಯಸಭೆಯಲ್ಲಿ ಇಂದು ಬುಧವಾರ ತ್ರಿವಳಿ ತಲಾಕ್‌ ಅಪರಾಧೀಕರಿಸುವ ಮಸೂದೆಯನ್ನು ಮಂಡಿಸಲಾಯಿತು. ಆದರೆ ವಿರೋಧ ಪಕ್ಷ ಕಾಂಗ್ರೆಸ್‌ ಕೋರೇಗಾಂವ್‌ – ಭೀಮಾ ದಲಿತ ಹಿಂಸಾತ್ಮಕ ಪ್ರತಿಭಟನೆಯ ವಿಷಯದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕಾರಣ ಸದನದಲ್ಲಿ ಭಾರೀ ಗದ್ದಲ, ಗೊಂದಲ ಉಂಟಾಯಿತು.ಬಿಜೆಪಿ, ಕಾಂಗ್ರೆಸ್‌ ನಡುವೆ ವಾಕ್ಸಮರವೇ ಸ್ಫೋಟಿಸಿತು.

Advertisement

‘ಇದು ತ್ರಿವಳಿ ತಲಾಕ್‌ ಮಸೂದೆಗೆ ತಡೆ ಒಡ್ಡುವ ಕಾಂಗ್ರೆಸ್‌ ಮತ್ತು ವಿಪಕ್ಷಗಳ ತಂತ್ರೋಪಾಯವಾಗಿದೆ’ ಎಂದು ಮೇಲ್ಮನೆಯಲ್ಲಿ ಕಾನೂನು ಸಚಿವ ರವಿ ಶಂಕರ್‌ ಪ್ರಸಾದ್‌ ನೀಡಿದ ಹೇಳಿಕೆಯಿಂದ ವಿಪಕ್ಷೀಯರು ಕೆರಳಿದರು;  ಗಲಭೆ ತಾರಕಕ್ಕೇರಿತು. ಆಳುವ ಬಿಜೆಪಿ ಸರಕಾರ ದಲಿತ ವಿರೋಧಿ ಎಂದು ವಿಪಕ್ಷೀಯರು ಬೊಬ್ಬಿಡತೊಡಗಿದರು. 

ಈ ನಡುವೆ ಕಾಂಗ್ರೆಸ್‌ ನಾಯಕ ಆನಂದ್‌ ಶಮಾರ ಅವರು ಸದನದಲ್ಲಿ ನೊಟೀಸೊಂದನ್ನು ಮಂಡಿಸಿ ತ್ರಿವಳಿ ತಲಾಕ್‌ ಮಸೂದೆಯನ್ನು ರಾಜ್ಯಸಭೆಯ ಆಯ್ದ ಸಮಿತಿಗೆ ಉಲ್ಲೇಖೀಸಬೇಕು ಎಂದು ಹೇಳಿ ಸಮಿತಿಯ ಸಂಭಾವ್ಯ ಸದಸ್ಯರನ್ನು ಹೆಸರಿಸಿದರು. 

ಇದಕ್ಕೆ ಮೊದಲು ಸದನದಲ್ಲಿ ಮಾತನಾಡಿದ ಕಾನೂನು ಸಚಿವ ಆರ್‌ ಎಸ್‌ ಪ್ರಸಾದ್‌ ಅವರು ಲೋಕಸಭೆಯಲ್ಲಿ ತ್ರಿವಳಿ ತಲಾಕ್‌ ನಿಷೇಧಿಸುವ ಮಸೂದೆ ಪಾಸಾದ ಬಳಿಕವೂ ಮೊರಾದಾಬಾದ್‌ನಲ್ಲಿ ಮಹಿಳೆಯೊಬ್ಬರಿಗೆ ಆಕೆಯ ಪತಿ ತ್ರಿವಳಿ ತಲಾಕ್‌ ನೀಡಿರುವುದು ವಿಪರ್ಯಾಸಕರ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next