Advertisement

ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ!

06:45 AM Oct 27, 2017 | Team Udayavani |

ಅಹಮದಾಬಾದ್‌: ಗುಜರಾತ್‌ ಚುನಾವಣೆ ಈ ಬಾರಿ ಮೂವರು ಯುವರ ಮುಖಂಡರು ಮತ್ತು ಮೂರು ಪಕ್ಷಗಳ ಮಧ್ಯದ ಹೋರಾಟವಾಗಿ ಪರಿಣಮಿಸುವ ನಿರೀಕ್ಷೆಯಿದೆ. ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್‌ ಯುವ ಮುಖಂಡರಿಗೆ ಮಣೆ ಹಾಕಿದ್ದರೆ, ಬಿಜೆಪಿ ವಿರೋಧಿ ಬಣದ ಮತಗಳನ್ನು ಒಡೆದು ಹಾಕಲು ಎಎಪಿ ಹಾಗೂ ಎನ್‌ಸಿಪಿ ಮತ್ತು ಜನ ವಿಕಲ್ಪ ಪಕ್ಷಗಳು ನೆರವಾಗಲಿವೆ ಎನ್ನಲಾಗಿದೆ.

Advertisement

ಕಾಂಗ್ರೆಸ್‌ನ ರಣತಂತ್ರದ ಪ್ರಮುಖ ಭಾಗವೇ ಮೂವರು ಯುವ ಮುಖಂಡರು. ಒಬಿಸಿ ಸಮುದಾಯದ ಅಲ್ಪೇಶ್‌ ಠಾಕೂರ್‌, ಇತ್ತೀಚೆಗಷ್ಟೇ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಪಟೇಲರಿಗೆ ಮೀಸಲು ಬೇಡಿಕೆ ಹೋರಾಟದಿಂದ ಹೆಸರಾದ ಮುಖಂಡ ಹಾರ್ದಿಕ್‌  ಕಾಂಗ್ರೆಸ್‌ ಸೇರುವ ಸಾಧ್ಯತೆಯಿದೆ. ಅಲ್ಲದೆ ದಲಿತ ಮುಖಂಡ ಜಿಗ್ನೇಶ್‌ ಮೇವಾನಿಯೂ ಪಕ್ಷ ಸೇರಲಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೇತೃತ್ವದಲ್ಲಿ ತನ್ನ ಚುನಾವಣಾ ತಂತ್ರವನ್ನು ಮರುರೂಪಿಸುತ್ತಿದೆ. 2012ರಲ್ಲಿ ಕಾಂಗ್ರೆಸ್‌ ಜತೆ ಸೇರಿ ಸ್ಪರ್ಧಿಸಿದ್ದ ಎನ್‌ಸಿಪಿ ಈ ಬಾರೀ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ. ರಾಜ್ಯಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ವಿಪ್‌ ಉಲ್ಲಂ ಸಿ ಬಿಜೆಪಿಗೆ ಎನ್‌ಸಿಪಿಯ ಇಬ್ಬರು ಶಾಸಕರು ಮತ ಹಾಕಿದ್ದರು.  ಶಂಕರ್‌ಸಿಂಗ್‌ ವಘೇಲಾ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡು, ಜನ ವಿಕಲ್ಪ ಪಕ್ಷ ಸೇರಿದ್ದಾರೆ. ಒಬಿಸಿ ಮತ್ತು ಕ್ಷತ್ರಿಯರ ಮತಗಳನ್ನು ವಘೇಲರ ಜನ ವಿಕಲ್ಪ ಪಕ್ಷ ಸೆಳೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next