Advertisement

ಅರಣ್ಯ ಇಲಾಖೆಯಿಂದಲೇ ಮರ ನಾಶ

05:12 PM Jun 24, 2021 | Team Udayavani |

ಶಿರಸಿ: ಅರಣ್ಯ ಇಲಾಖೆ ವಿವಿಧ ಕಾಮಗಾರಿಗಳ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಜಿಲ್ಲಾದ್ಯಂತ ಒಂದು ಲಕ್ಷಕ್ಕೂ ಮಿಕ್ಕಿ ಬೆಲೆ ಬಾಳುವ ಗಿಡ, ಮರ ಕಡಿದು, ಕೋಟ್ಯಾಂತರ ರೂ. ಅರಣ್ಯ ಪರಿಸರ ಮೌಲ್ಯ ನಾಶಕ್ಕೆ ಅರಣ್ಯ ಇಲಾಖೆ ಜವಾಬ್ದಾರವಾಗಿದೆ. ಇಂತಹ ಪರಿಸರ ವಿರೋಧಿ ಅವೈಜ್ಞಾನಿಕ ಪದ್ಧತಿ ಕೈಬಿಡಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

Advertisement

ಅವರು ಅರಣ್ಯ ಇಲಾಖೆ ಫೋಕಸ್‌- 2 ಇದರ ನಿಮಿತ್ತ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಅರಣ್ಯ ಇಲಾಖೆಯ ಅವೈಜ್ಞಾನಿಕ ನೀತಿಯಿಂದ ಪರಿಸರ ಮೌಲ್ಯ ನಾಶದ ಚಿತ್ರಣ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲಾದ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ಬೆಲೆ ಬಾಳುವ ಗಿಡ, ಮರ ನಾಶಪಡಿಸಿ ಕೆರೆಯ ದಡಕ್ಕೆ ಹಾಕಿ, ಅದರ ಮೇಲೆ ಕೆರೆಯ ಮಣ್ಣಿನಿಂದ ಮುಚ್ಚಿ, ಮರ ಕಡಿದ ಸಾಕ್ಷé ನಾಶಪಡಿಸಲಾಗುತ್ತಿದೆ ಎಂದು ಅವರು ಅರಣ್ಯ ಇಲಾಖೆ ಕರ್ತವ್ಯ ಚ್ಯುತಿ ಕುರಿತು ಪ್ರಸ್ತಾಪಿಸುತ್ತ, ಅರಣ್ಯ ಇಲಾಖೆ ಕಾರ್ಯವು ಕಾನೂನು ಬಾಹಿರ ಮತ್ತು ಶಿಕ್ಷಾರ್ಹವಾಗಿದೆ ಎಂದು ಅವರು ಹೇಳುತ್ತಾ, ಕಳೆದ ಐದು ವರ್ಷದ ಅವಧಿಯಲ್ಲಿ ಅರಣ್ಯ ಪ್ರದೇಶದಲ್ಲಿನ ಒಟ್ಟು ಕಾಮಗಾರಿಗೆ ಕ್ಷೇತ್ರವನ್ನು ಅರಣ್ಯ ಸಾಂದ್ರತೆ ಅನುಪಾತಕ್ಕೆ ಹೋಲಿಸಿದಾಗ ಸುಮಾರು ಒಂದು ಲಕ್ಷ ಗಿಡ, ಮರ ನಾಶವಾಗಿರಬಹುದಾಗಿ ಅಂದಾಜಿಸಲಾಗಿದೆ ಎಂದು ಹೇಳಿದರು.

ಅವೈಜ್ಞಾನಿಕವಾಗಿ ಗಿಡ, ಮರ ಕಡಿಯುವ ಪ್ರವೃತ್ತಿ ಹಾಗೂ ಪರಿಸರಕ್ಕೆ ಪೂರಕವಲ್ಲದ ಸಸಿ ನೆಡುವ ಪದ್ಧತಿ ನಿಲ್ಲಿಸದ್ದಿದ್ದಲ್ಲಿ ವೇದಿಕೆ ಅರಣ್ಯ ಪರಿಸರ ಮೌಲ್ಯ ನಾಶವಾಗುವುದನ್ನು ನಿಯಂತ್ರಿಸಲು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next