Advertisement

ಮರ ಬಿದ್ದು ಚಾರ್ಮಾಡಿ ರಸ್ತೆ ಸಂಚಾರಕ್ಕೆ ತಡೆ

09:53 AM Sep 02, 2021 | Team Udayavani |

ಬೆಳ್ತಂಗಡಿ: ನಿರಂತರ ಮಳೆಯಾಗುತ್ತಿರುವ ಪರಿಣಾಮ ರಾಷ್ಟ್ರೀಯ ಹೆದ್ದಾರಿ 73 ರ ಚಾರ್ಮಾಡಿ ಘಾಟ್ ಆರಂಭದಲ್ಲಿ ಮರ ಬಿದ್ದು ಗುರುವಾರ ರಸ್ತೆ ತಡೆ ಉಂಟಾಗಿದೆ.

Advertisement

ರಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಿಂದ ಮರ ತೆರವುಗೊಳಿಸುವ ಕಾರ್ಯ ನಡೆಯಿತು.

ಇದನ್ನೂ ಓದಿ:ಸುರಕ್ಷಿತ ಪ್ರಯಾಣಕ್ಕೆ ಸೀಟ್‌ಬೆಲ್ಟ್  ಧಾರಣೆ ಅತ್ಯಗತ್ಯ 

ಚಾರ್ಮಾಡಿ ಘಾಟ್ ಮುಂಜಾನೆ ಅತೀ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಎರಡು ಕಡೆ ರಸ್ತೆ ತಡೆ ಉಂಟಾಯಿತು.

Advertisement

ಮುಂಜಾನೆ 8.45 ರ ಸುಮಾರಿಗೆ ಮರ ಬಿದ್ದಿದ್ದು, ಇದೀಗ ತೆರವು ಕಾರ್ಯ ಯಶಸ್ವಿಯಾಗಿದೆ. ಸುಮಾರು 100 ಕ್ಕೂ ಅಧಿಕ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿತ್ತು. ಚಾರ್ಮಾಡಿ ಹಸನಬ್ಬ ಸಹಿತ ಹಲವು ಸಮಾಜ ಸೇವಕರು ತಕ್ಷಣ ಸ್ಥಳಕ್ಕೆ ಧಾವಿಸಿ ಮರ ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next