Advertisement

ಚಿಕಿತ್ಸೆ ನೀಡಿದರೂ ಚೇತರಿಸದ ಸಲಗ

01:30 AM May 16, 2019 | Team Udayavani |

ಸುಬ್ರಹ್ಮಣ್ಯ: ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಲಗದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಿಲ್ಲ.


Advertisement

ಬುಧವಾರ ಗ್ರಾಮಸ್ಥರು ಕಾಡಿಗೆ ತೆರಳಿ ಆನೆಯನ್ನು ವೀಕ್ಷಿಸಿದ್ದು ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳದೇ ಇರುವುದನ್ನು ನೋಡಿದ್ದಾರೆ. ಜತೆಗೆ ಬೈನೆ ಆಹಾರ ಆನೆಗೆ ನೀಡಿದ್ದಾರೆ ಆನೆಯು ಶಕ್ತಿ ಹೀನವಾಗಿದ್ದು ನೋವು ಉಲ್ಬಣಿಸಿ ನಡೆಯಲು ಕಷ್ಟ ಪಡುತ್ತಿದೆ ಆಹಾರ ನೀರು ಕೊಂಡು ಹೋಗಿ ಅದರ ಆರೈಕೆಗೆ ಯತ್ನಿಸಿದ್ದಾರೆ. ಈ ನಡುವೆ ಬುಧವಾರ ಅರಣ್ಯ ಇಲಾಖೆ ಸಿಬಂದಿ ಒಂದೆರಡು ಕೆಲಸದವರನ್ನು ಕಾಡಿಗೆ ಕರೆದೊಯ್ದು ಆನೆಯನ್ನು ಪಟಾಕಿ ಸಿಡಿಸಿ ಕಾಡಿಂದಾಚೆಗೆ ಓಡಿಸಲು ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇದೇ ರೀತಿ ಆನೆಯನ್ನು ಬಿಟ್ಟರೆ ಅದರ ಆರೋಗ್ಯ ಪೂರ್ಣವಾಗಿ ಕೆಟ್ಟು ಸಾವಿನಂಚಿಗೆ ಹೋಗಬಹುದು. ಆದ್ದರಿಂದ ಆನೆ ಬಗ್ಗೆ ಇಲಾಖೆ ಗಂಭೀರವಾಗಿ ಪರಿಗಣಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next