Advertisement

ಕ್ಲೀನರ್‌ಗೆ ರೇಗಿಸಿದ್ದಕ್ಕೆ ಹೆಣವಾದ ಟ್ರಾವೆಲ್ಸ್‌ ಸಿಬ್ಬಂದಿ

01:02 PM Jul 12, 2023 | Team Udayavani |

ಬೆಂಗಳೂರು: ಸ್ನೇಹಿತನನ್ನು ವಂಡ್ರೆ ಎಂದು ರೇಗಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು, ಓರ್ವ ಮೃತಪಟ್ಟರೆ, ಮತ್ತೂರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Advertisement

ಆಂಧ್ರ ಪ್ರದೇಶದ ಹಿಂದೂಪುರ ಮೂಲದ ನಿವಾಸಿ ಮುರುಳಿ (25) ಕೊಲೆಯಾದವ. ಹಲ್ಲೆಗೊಳಗಾದ ಮನೋಹರ್‌ ಚಿಕಿತ್ಸೆ ಪಡೆಯುತ್ತಿದ್ದಾನೆ. ರೋಹಿತ್‌ ತಲೆಮರೆಸಿಕೊಂಡಿರುವ ಆರೋಪಿ. ಆನಂದ್‌ ರಾವ್‌ ವೃತ್ತದ ಬಳಿಯಿರುವ ಟ್ರಾವೆಲ್ಸ್‌ವೊಂದರಲ್ಲಿ ಮುರುಳಿ ಬಸ್‌ ಬುಕ್ಕಿಂಗ್‌ ಕೆಲಸ ಮಾಡುತ್ತಿದ್ದ. ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಸ್ನೇಹಿತರಾದ ಮನೋಹರ್‌, ಶ್ರೇಯಸ್‌, ಸಂದೀಪ್‌ ಜತೆಗೆ ಆನಂದ್‌ ರಾವ್‌ ವೃತ್ತದಲ್ಲಿರುವ ಬಾರ್‌ಗೆ ತೆರಳಿ ಮದ್ಯಪಾನ ಮಾಡಿದ್ದ. ತಡರಾತ್ರಿ 12 ಗಂಟೆಗೆ ಸ್ನೇಹಿತರೊಂದಿಗೆ ಕಚೇರಿಗೆ ವಾಪಸ್ಸಾಗಿದ್ದ ಮುರಳಿ ಬಸ್‌ ಕ್ಲೀನರ್‌ ಒಬ್ಬನಿಗೆ ವಂಡ್ರೆ ಎಂದು ರೇಗಿಸಿದ್ದ.

ಇದರಿಂದ ಆಕ್ರೋಶಗೊಂಡ ಕ್ಲಿನರ್‌ ಮುರಳಿ ಜತೆಗೆ ಜಗಳ ತೆಗೆದಿದ್ದ. ಟ್ರಾವೆಲ್ಸ್‌ ಕಚೇರಿ ಮಾಲೀಕ ಚಿಕ್ಕಣ್ಣ ಜಗಳ ಬಿಡಿಸಿ ಇಬ್ಬರನ್ನೂ ಕಳುಹಿಸಿದ್ದರು. ಚಿಕ್ಕಣ್ಣ ಮನೆಗೆ ಹೋದ ಬಳಿಕ ಮತ್ತೆ ಕಚೇರಿಗೆ ಬಂದ ಮುರಳಿ ಕ್ಲಿನರ್‌ಗೆ ಪುನಃ ವಂಡ್ರೆ ಎಂದು ಬೆದರಿಸಿದ್ದ. ಟ್ರಾವೆಲ್ಸ್‌ ಕಚೇರಿಯಲ್ಲಿದ್ದ ಆರೋಪಿ ರೋಹಿತ್‌ ಇದನ್ನು ಗಮನಿಸಿ ಮುರಳಿಗೆ ಬೆದರಿಸಿದ್ದ. ಇವರ ನಡುವೆ ಉಂಟಾದ ಜಗಳ ತಾರಕಕ್ಕೇರಿದಾಗ ರೋಹಿತ್‌ ಕಬ್ಬಿಣದ ರಾಡ್‌ನಿಂದ ಮುರಳಿ ತಲೆಗೆ ಹಲ್ಲೆ ನಡೆಸಿದ್ದ.

ಜಗಳ ಬಿಡಿಸಲು ಬಂದ ಮನೋಹರ್‌ ಗೂ ರೋಹಿತ್‌ ಇದೇ ರಾಡ್‌ನಿಂದ ಹಲ್ಲೆ ನಡೆಸಿದ್ದ. ಕಚೇರಿಯ ಬಳಿಯಿದ್ದ ಶ್ರೇಯಸ್‌ ಇದನ್ನು ಗಮನಿಸಿ ಟ್ರಾವೆಲ್ಸ್‌ ಮಾಲೀಕ ಚಿಕ್ಕಣ್ಣರಿಗೆ ಕರೆ ಮಾಡಿ ವಿಷಯ ತಿಳಿಸಿದ್ದ. ಕೂಡಲೇ ಕಚೇರಿಗೆ ಬಂದ ಚಿಕ್ಕಣ್ಣ ಇಬ್ಬರನ್ನೂ ಕೆಸಿ ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದರು. ಮುರಳಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೇ ಮೃತಪಟ್ಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next