Advertisement

ಸಾರಿಗೆ ನೌಕರರ ಪ್ರತಿಭಟನೆಗೆ ಇತರೆ ಸಂಘಟನೆಗಳ ಬೆಂಬಲ

03:38 PM Apr 13, 2021 | Team Udayavani |

ನೆಲಮಂಗಲ: 6ನೇ ವೇತನ ಆಯೋಗದ ಶಿಫಾ ರಸು ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಲ ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸೋಮವಾರ ಕುಟುಂಬ ಸದಸ್ಯರು, ಕರವೇ, ಮತ್ತಿತರ ಸಂಘಟನೆಗಳುಕೈಜೋಡಿಸಿ, ತಾಲೂಕು ಕಚೇರಿ ಮುಂದೆ ತಟ್ಟೆ-ಲೋಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದವು.

Advertisement

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಬಸ್‌ ನಿಲ್ದಾಣಕ್ಕೆ ತಮ್ಮ ಕುಟುಂಬಸಮೇತವಾಗಿ ಲಗ್ಗೆ ಯಿಟ್ಟ ಸಾರಿಗೆ ಸಿಬ್ಬಂದಿ ಸರ್ಕಾರ ಮತ್ತು ನಿಗಮದ ಆಡಳಿತ ಮಂಡಳಿಯ ವಿರುದ್ಧ ಧಿಕ್ಕಾರ ಕೂಗುವುದ ರೊಂದಿಗೆ ನಮ್ಮಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಬಳಿಕ ಸಾರಿಗೆ ಸಿಬ್ಬಂದಿ ತಾಲೂಕು ಕಚೇರಿವರೆಗೂ ಸಾಗಿ ತಹಸೀಲ್ದಾರ್‌ ಕೆ.ಮಂಜು ನಾಥ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶಿಫಾರಸಿನಂತೆ ವೇತನ ನೀಡಿ: ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಯನ್ನೂ ಸರ್ಕಾರಿ ನೌಕರರೆಂದು ಘೋಷಿಸುವುದರೊಂದಿಗೆ ತಮಗೂ ಎಲ್ಲಾಸೌಲಭ್ಯ ನೀಡಬೇಕು ಎಂದು ಕಳೆದ ಡಿ.20ರಂದು ಸಾರಿಗೆ ಸಚಿವರನ್ನುಒಳಗೊಂಡ ಸಂಧಾನ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಸಾರಿಗೆನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬೇಡಿಕೆ ಹೊರತುಪಡಿಸಿ, ಉಳಿದ 8 ಬೇಡಿಕೆ ಈಡೇರಿಸಲು ಮೂರುತಿಂಗಳ ಗಡುವು ನೀಡಲಾಗಿತ್ತು. ಆದರೂ, ಬೇಡಿಕೆಗಳಲೂ ಈಡೇರಿಲ್ಲ, ಈಗ ನಮಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನವನ್ನು ನಿಗದಿಪಡಿಸಬೇಕು, ಕಣ್ಣೋರೆಸುವ ಸರ್ಕಾರದ ತಂತ್ರಗಾರಿಕೆಗೆ ನಾವು ಬಗ್ಗುವುದಿಲ್ಲ ಎಂದು ಪ್ರತಿಭಟನಾನಿರತರು ಹೇಳಿದರು.

ಸಮಸ್ಯೆ ಬಗೆಹರಿಸಲು ಚಿಂತನೆ: ಮನವಿ ಸ್ವೀಕರಿ ಸಿದ ತಹಶೀಲ್ದಾರ್‌ ಕೆ.ಮಂಜುನಾಥ್‌ ಮಾತನಾಡಿ, ಪ್ರಸ್ತುತ ಕೋವಿಡ್ ಸೋಂಕಿನಿಂದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ತಮಸೇವಾ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸಾರಿಗೆ ಸಂಪರ್ಕ ಜನರನಿತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ಕೋವಿಡ್‌, ಯುಗಾದಿಹಿನ್ನೆಲೆಯಲ್ಲಿ ರಾಜ್ಯದ ಜನರಿಗೆ ಸಮಸ್ಯೆ ಎದುರಾಗಬಾರದು,ತಾವುಗಳು ಕೆಲಸಕ್ಕೆ ಮುಂದಾಗಿ ಸರ್ಕಾರ ನಿಮ್ಮ ಸಮಸ್ಯೆ ಬಗೆ ಹರಿಸುವನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಹೇಳಿದರು.

ಕರವೇ (ಪ್ರವೀಣ್‌ಶೆಟ್ಟಿ ಬಣ) ರಾಜ್ಯ ಉಪಾಧ್ಯಕ್ಷಉಮೇಶ್‌ಗೌಡ, ಕಾಂಗ್ರೆಸ್‌ ಮುಖಂಡ ಮಿಲ್ಟ್ರಿ ಮೂರ್ತಿ, ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾ ಧ್ಯಕ್ಷ ಬಿ.ಆರ್‌.ಭಾಸ್ಕರ್‌ ಪ್ರಸಾದ್‌, ಬೊಮ್ಮನಹಳ್ಳಿ ನಾರಾಯಣಸ್ವಾಮಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next