Advertisement
ಸಚಿವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ, ವರ್ಚಸ್ಸು ಇರುತ್ತದೆ. ಅದರಲ್ಲಿಯೇ ಮೂಲಕವೇ ತಮ್ಮವರ ಕೆಲಸ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರ ಒಒಡಿ ಮಾಡುವವರ ಹಿಂದಿದೆ. ಇದೇ ಕಾರಣಕ್ಕಾಗಿ ಇನ್ನೂ ಕೆಲವರು ಈ “ನೆಮ್ಮದಿ ಕೇಂದ್ರ’ಕ್ಕೆ ಬರಲು ಉತ್ಸುಕರಾಗಿದ್ದಾರೆ.
Related Articles
Advertisement
ಈ ಮಧ್ಯೆ, ಈಗಾಗಲೇ ನಾಲ್ಕೂ ಸಾರಿಗೆ ನಿಗಮಗಳು 2016ರಿಂದ ಈಚೆಗೆ ನಿರಂತರವಾಗಿ ನಷ್ಟದಲ್ಲಿದ್ದು, ಈ ರೀತಿಯ ಎರವಲು ಸೇವೆ ತುಸು ಆರ್ಥಿಕ ಹೊರೆಗೂ ಕಾರಣವಾಗುತ್ತದೆ. ಆದರೆ, ಮತ್ತೂಂದು ದೃಷ್ಟಿಯಿಂದ ಈ ಎರವಲು ಸೇವೆಯು ಸಮನ್ವಯತೆ ಹೆಚ್ಚಲು ಅನುಕೂಲ ಆಗುತ್ತದೆ. ನಿಗಮದ ಸಿಬ್ಬಂದಿ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವುದರಿಂದ ಸಹಜವಾಗಿಯೇ ನಿಗಮಕ್ಕೆ ಸಂಬಂಧಪಟ್ಟ ಕೆಲಸಗಳು ಸಲೀಸಾಗಿ ಮತ್ತು ತ್ವರಿತವಾಗಿ ಆಗುತ್ತವೆಂದು ಕೆಎಸ್ಆರ್ಟಿಸಿಯ ಮತ್ತೂಬ್ಬ ಅಧಿಕಾರಿ ಅಭಿಪ್ರಾಯಪಡುತ್ತಾರೆ.
ಡಿಪಿಎಆರ್ ನಿಯಮವೇನು?ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಪ್ರಕಾರ ಸಚಿವರ ಕಚೇರಿಯಲ್ಲಿ ಗರಿಷ್ಠ 12 ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಅವಕಾಶವಿದೆ. ಅದರಲ್ಲಿ ಒಬ್ಬರು ಆಪ್ತ ಕಾರ್ಯದರ್ಶಿ, ನಾಲ್ವರು ಆಪ್ತ ಸಹಾಯಕರು, ಒಬ್ಬರು ಶೀಘ್ರ ಲಿಪಿಗಾರ, ನಾಲ್ವರು ದಲಾಯತರು, ಇಬ್ಬರು ಚಾಲಕರು ಹಾಗೂ ಪೊಲೀಸ್ ಆಯುಕ್ತರ ಕಚೇರಿಯಿಂದ ಮೂವರು ಗನ್ಮ್ಯಾನ್ಗಳು. ಇದರ ಹೊರತಾಗಿ ಸಚಿವರು ವಿವಿಧ ಇಲಾಖೆಗಳಿಂದ ಎರವಲು ರೂಪದಲ್ಲಿ ಸಿಬ್ಬಂದಿಯನ್ನು ಪಡೆಯಲು ಅವಕಾಶ ಇದೆ. ಇದಕ್ಕೆ ನಿರ್ದಿಷ್ಟ ಮಿತಿ ಇರುವುದಿಲ್ಲ ಎಂದು ಡಿಪಿಎಆರ್ ಮೂಲಗಳು ತಿಳಿಸಿವೆ. ನಿಖರವಾಗಿ ಎಷ್ಟು ಜನ ಇದ್ದಾರೆ ಎಂಬುದರ ಮಾಹಿತಿ ಸದ್ಯಕ್ಕಿಲ್ಲ. ಆದರೆ, ನಿಗದಿಪಡಿಸಿದ ಮಿತಿಯಲ್ಲೇ ಸಿಬ್ಬಂದಿಯನ್ನು ಹೊಂದಿದ್ದೇನೆ. ಯಾವುದೇ ನಿಯಮವನ್ನು ಮೀರಿಲ್ಲ.
– ಡಿ.ಸಿ. ತಮ್ಮಣ್ಣ, ಸಾರಿಗೆ ಸಚಿವರು. – ವಿಜಯಕುಮಾರ ಚಂದರಗಿ