Advertisement

ಮಂಗಳಮುಖಿಯರ ಗುಂಪುಗಳ ಮಾರಾಮಾರಿ:ಹೈರಾಣಾದ ಪೊಲೀಸರು !

03:27 PM Feb 03, 2018 | Team Udayavani |

ಚಿತ್ರದುರ್ಗ : ಬಡಾವಣೆ ಪೊಲೀಸ್‌ ಠಾಣೆಯ ಎದುರು ಇಂದು ಶನಿವಾರ ಮಂಗಳಮುಖಿಯರ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಜಗಳ ಬಿಡಿಸಲು ನಿರತರಾದ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. 

Advertisement

ಕಲೆಕ್ಷನ್‌ ವಿಚಾರವಾಗಿ ಸ್ಥಳೀಯ ಮಂಗಳಮುಖಿಯರು ಮತ್ತು ಚಾಮರಾಜನಗರ ಮತ್ತು ಬೆಂಗಳೂರಿನಿಂದ ಬಂದ ಮಂಗಳಮುಖಿಯರ ನಡುವೆ ಹೊಡೆದಾಟ ನಡೆದಿದ್ದು ,ಪರಸ್ಪರ ಜಡೆ ಎಳೆದು, ಸೀರೆ ಎಳೆದುಕೊಂಡು ಗುದ್ದಾಡಿದ್ದಾರೆ. 

ಹಲವು ಬಾರಿ ಎಚ್ಚರಿಕೆ ನೀಡಿದರೂ ವಸೂಲಿ ನಿಲ್ಲಿಸದ ಹಿನ್ನಲೆಯಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ. 

2 ಗಂಪುಗಳ ನಡುವಿನ ವಿವಾದ ಇದೀಗ ಠಾಣೆಯ ಮೆಟ್ಟಿಲೇರಿದ್ದು ಮಾತುಕತೆ ನಡೆಸಲು ಮುಂದಾದಾಗ ಜಗಳ ನಡೆದಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next