Advertisement
ಹೀಗೆ ಸೆಸ್ಕ್ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ತರಾಟೆಗೆ ತೆಗೆದುಕೊಂಡವರು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಕೆ.ಶಿವಪ್ರಕಾಶ್ ಹಾಗೂ ಹೆಚ್.ಟಿ.ಮಂಜು.
Related Articles
Advertisement
ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಸಮೀಪದ ಸಾದೇನಹಳ್ಳಿಯಲ್ಲಿ ಕೊಳವೆಬಾವಿಯೊಂದು ಸಂಪೂರ್ಣ ಬತ್ತಿದೆ. ಅಲ್ಲಿಂದ 300 ಮೀ. ದೂರದಲ್ಲಿ ಹೊಸ ಕೊಳವೆ ಬಾವಿ ನಿರ್ಮಿಸಿದೆ. ಇದೇ ಸಂಪರ್ಕವನ್ನು ಅಲ್ಲಿಗೆ ಸ್ಥಳಾಂತರಿಸದೆ ವಿಳಂಬ ಮಾಡಲಾಗುತ್ತಿದೆ. ಮೇಲಧಿಕಾರಿ ಕೇಳಿದರೆ ಸ್ಥಳಾಂತರಕ್ಕೆ ಅವಕಾಶವಿಲ್ಲ ಎನ್ನುತ್ತಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಪ್ರಕಾಶ್ ಪ್ರಶ್ನಿಸಿದರು. ಇದಕ್ಕೆ ಸೆಸ್ಕ್ ಅಧಿಕಾರಿ ಉತ್ತರಿಸಿ, ಪ್ರತಿ 50 ಮೀಟರ್ ದೂರಕ್ಕೆ ಒಂದೊಂದು ಕಂಬ ನೆಡಬೇಕಾಗುತ್ತದೆ. ಅದರಂತೆ 6 ಕಂಬ ನೆಟ್ಟು ವಿದ್ಯುತ್ ಸಂಪರ್ಕ ಸ್ಥಳಾಂತರ ಮಾಡಬಹುದು. ಅದರ ಅಂದಾಜು ವೆಚ್ಚ ತಯಾರಿಸಿ ನೀಡುವುದಾಗಿ ಹೇಳಿದರು. ಕೆ.ಆರ್.ಪೇಟೆ ತಾಲೂಕಿನ ಹರಳಹಳ್ಳಿಯಲ್ಲಿ 5-6 ಕಂಬ ಗಾಳಿ-ಮಳೆಗೆ ಮುರಿದುಕೊಂಡು ಅಪಾಯಕಾರಿ ಸ್ಥಿತಿಯಲ್ಲಿವೆ. ಒಂದು ತಿಂಗಳಾದರೂ ಅವುಗಳನ್ನು ಸುಸ್ಥಿತಿಗೆ ತರುವ ಪ್ರಯತ್ನ ನಡೆಸಿಲ್ಲ ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಪ್ರಶ್ನಿಸಿದರು. ಶೀಘ್ರ ಮಾಹಿತಿ ಪಡೆದು ಅವುಗಳನ್ನು ಸರಿಪಡಿಸುವುದಾಗಿ ಸೆಸ್ಕ್ ಅಧಿಕಾರಿಗಳು ತಿಳಿಸಿದರು.
ನಿತ್ಯ 5000 ಲೀಟರ್ ಖಾಸಗಿ ಹಾಲು ಮಾರಾಟ: ಮಂಡ್ಯ ಜಿಲ್ಲೆಯಲ್ಲಿ ನಿತ್ಯ 5000 ಲೀಟರ್ ಖಾಸಗಿ ಹಾಲು ಮಾರಾಟವಾಗುತ್ತಿದೆ. ಗ್ಯಾಟ್ ಒಪ್ಪಂದದ ಪ್ರಕಾರ ಲೈಸೆನ್ಸ್ ಇಲ್ಲದೆ ಮಾರಾಟ ಮಾಡುವುದಕ್ಕೆ ಕಂಪನಿಗಳಿಗೆ ಅವಕಾಶವಿದೆ. ನಾವೂ ಸಹ ನಂದಿನಿ ಹಾಲಿನ ಬಗ್ಗೆ ಪ್ರಚಾರ ಮಾಡುತ್ತಿರುವುದಾಗಿ ಮನ್ಮುಲ್ ಜಂಟಿ ನಿರ್ದೇಶಕ ರಾಜು ಸಭೆಗೆ ತಿಳಿಸಿದಾಗ, ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿರುವಿರಿ ಎಂದು ಪ್ರಭಾರ ಸಿಇಒ ಪ್ರಕಾಶ್ ಪ್ರಶ್ನಿಸಿದರು. ಈ ಸಂಬಂಧ ನಾವು ಆಹಾರ ಸಂರಕ್ಷಕ ಮತ್ತು ಕಲಬೆರಕೆ ಸಂಸ್ಥೆಗೆ ಹಾಲಿನ ಪರೀಕ್ಷೆ ನಡೆಸುವಂತೆ ಪತ್ರ ಬರೆದಿದ್ದೇವೆ. ಅವರಿಗಷ್ಟೇ ಇದರ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಲ್ಲಿ ಪುರುಷರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಉತ್ಪಾದಕರಿಗೂ ಹಾಗೂ ಕಾರ್ಯದರ್ಶಿಗಳಿಗೂ ಘರ್ಷಣೆಯಾಗಿದೆ. ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ಮಾರ್ಗ ವಿಸ್ತರಣಾಧಿಕಾರಿಗಳು ಏನು ಮಾಡುತ್ತಿ ದ್ದಾರೆ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಪ್ರಕಾಶ್ ಪ್ರಶ್ನಿಸಿದಾಗ, ಈ ಬಗ್ಗೆ ನೋಟಿಸ್ ಜಾರಿಗೊಳಿಸಿದ್ದೇವೆ. 538 ಮಹಿಳಾ ಸಂಘಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎಂಬ ಬಗ್ಗೆ ಮಾಹಿತಿ ನೀಡಲಾಗುವುದು ಎಂದಾಗ, ಆಕ್ರೋಶಗೊಂಡ ಡಿ.ಕೆ.ಶಿವಪ್ರಕಾಶ್ ನೀವು ಹುದ್ದೆಗೆ ಬಂದು 3 ತಿಂಗಳಾಗಿದೆ ಎಂದಿದ್ದೀರಿ. ಇಲ್ಲಿಯವರೆಗೆ ಮಾಹಿತಿ ಪಡೆದುಕೊಂಡಿಲ್ಲವೇಕೆ ಎಂದು ಹರಿಹಾಯ್ದರು. ಜಿಪಂ ಉಪಾಧ್ಯಕ್ಷೆ ಗಾಯತ್ರಿ, ಮುಖ್ಯ ಯೋಜನಾಧಿಕಾರಿ ಧನುಷ್ ಇತರರಿದ್ದರು.