Advertisement

24 ಗಂಟೆಯಲ್ಲಿ  ಟ್ರಾನ್ಸ್‌ಫಾರ್ಮರ್‌ ಬದಲಾವಣೆ: ಸಚಿವ ವಿ. ಸುನಿಲ್‌ ಕುಮಾರ್‌

11:18 PM Dec 30, 2021 | Team Udayavani |

ಬೆಂಗಳೂರು: ವಿಫ‌ಲಗೊಂಡ ವಿದ್ಯುತ್‌ ಪರಿವರ್ತಕ (ಟ್ರಾನ್ಸ್‌ ಫಾರ್ಮರ್‌) ಬದಲಾವಣೆಗಾಗಿ ವರ್ಷಾನುಗಟ್ಟಲೆ ಹೋರಾಟ ಮಾಡಬೇಕಿದ್ದ ರೈತರ ಬವಣೆಗೆ ರಾಜ್ಯ ಇಂಧನ ಇಲಾಖೆ ಈಗ ಕೊನೆ ಹಾಡಿದೆ ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರೈತರ ಟ್ರಾನ್ಸ್‌ ಫಾರ್ಮರ್‌ ಬದಲಾವಣೆಯನ್ನು ದೂರು ಸಲ್ಲಿಕೆಯಾದ 24 ಗಂಟೆಯೊಳಗೆ ಮಾಡಬೇಕೆಂಬ ಗುರಿ ಸಾಧನೆಯಲ್ಲಿ ಇಂಧನ ಇಲಾಖೆ ಈಗ ಶೇ. 100ರಷ್ಟು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಟ್ರಾನ್ಸ್‌ ಫಾರ್ಮರ್‌ ಬ್ಯಾಂಕ್‌ ಸ್ಥಾಪನೆ ಮಾಡಲಾಗಿದ್ದು, ಸದ್ಯಕ್ಕೆ 10248 ಟ್ರಾನ್ಸ್‌ ಫಾರ್ಮರ್‌ಗಳ ದಾಸ್ತಾನು ಲಭ್ಯವಿದೆ. ರೈತರ ಮನವಿಗೆ ಸ್ಪಂದಿಸುವ ಮೂಲಕ ಜನಸ್ನೇಹಿ ಕಾರ್ಯದಲ್ಲಿ ಉಳಿದ ಇಲಾಖೆಗಿಂತ ನಮ್ಮ ಇಲಾಖೆ ಒಂದು ಹೆಜ್ಜೆ ಮುಂದೆ ಸಾಗಿದೆ.

27,637 ಅಳವಡಿಕೆ:

ತಾವು ಅಧಿಕಾರ ಅಳವಡಿಸಿಕೊಂಡ ಆರಂಭದಿಂದ ಇಲ್ಲಿಯವರೆಗೆ ಹಿಂಬಾಕಿ ಬೇಡಿಕೆಯೂ ಸೇರಿ ಎಲ್ಲ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 27,650 ವಿದ್ಯುತ್‌ ಪರಿವರ್ತಕಗಳು ವಿಫ‌ಲಗೊಂಡಿರುವ ಬಗ್ಗೆ ರೈತರು ದೂರು ದಾಖಲಿಸಿದ್ದರು. ಈ ಪೈಕಿ 21,145 ಪ್ರಕರಣಗಳಲ್ಲಿ 24 ಗಂಟೆಯೊಳಗಾಗಿ ಪರಿವರ್ತಕಗಳನ್ನು ಬದಲಾವಣೆ ಮಾಡಲಾಗಿದೆ. ರಸ್ತೆ ಸಂಪರ್ಕ ಸೇರಿದಂತೆ ಉಳಿದ ಅಡೆತಡೆಗಳು ಇರುವ ಕಡೆಗಳಲ್ಲಿ 24 ಗಂಟೆ ಕಳೆದ ಕೆಲ ತಾಸಿನ ಒಳಗಾಗಿ ಪರಿವರ್ತಕ ಬದಲಾವಣೆ ಮಾಡಿದ ಪ್ರಕರಣ 6492 ಎಂದು ತಿಳಿಸಿದ್ದಾರೆ.

ಹಿಂದೆ ಹೇಗಿತ್ತು ?  :

Advertisement

ಈ ಹಿಂದೆ ಪರಿವರ್ತಕ ಬದಲಾವಣೆ ವ್ಯವಸ್ಥೆ ಶೋಚನೀಯವಾಗಿತ್ತು. ರೈತರು ದೂರು ನೀಡಿ ಬದಲಾವಣೆಗೆ ಅರ್ಜಿ ಸಲ್ಲಿಸಿದ ಬಳಿಕ ತಿಂಗಳಾನುಗಟ್ಟಲೆ ಕಾಯಬೇಕಿತ್ತು. ನಾನಾ ಕಾರಣಗಳನ್ನು ನೀಡಿ ವಿಳಂಬ ಮಾಡಲಾಗುತ್ತಿತ್ತು. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗು ತ್ತಿತ್ತು. ಅಲ್ಲದೆ ವಿಫ‌ಲಗೊಂಡ ಪರಿವರ್ತಕಗಳನ್ನು ರೈತರು ಎತ್ತಿನಗಾಡಿ ಅಥವಾ ತಮ್ಮ ವಾಹನಗಳಲ್ಲಿ ಆಯಾ ಸರಬರಾಜು ಕಚೇರಿಗೆ ತಲುಪಿಸುತ್ತಿದ್ದರು. ಆದರೆ ರಾಜ್ಯ ಸರಕಾರ ಈ ಪದ್ಧತಿಯಲ್ಲೂ ಬದಲಾವಣೆ ತಂದಿದೆ. ಈಗ ವಿಫ‌ಲಗೊಂಡ ಪರಿವರ್ತಕವನ್ನು ಇಲಾಖೆ ವತಿಯಿಂದಲೇ ಉಚಿತವಾಗಿ ಸಾಗಿಸಿ ಹೊಸ ಟ್ರಾನ್ಸ್‌ ಫಾರ್ಮರ್‌ ಸರಬರಾಜು ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next