Advertisement

ವರ್ಗಾವಣೆ ಬರೆ: ತಾಪಂ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ

03:44 PM Aug 19, 2017 | |

ಮುದ್ದೇಬಿಹಾಳ: ತಾಲೂತ ಪಂಚಾಯತ್‌ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಲಿತ ನೌಕರರಿಗೆ ಕೆಲ ಜನ ಪ್ರತಿನಿಧಿಗಳು ವರ್ಗಾವಣೆ ಬರೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಮಾದಿಗ ದಂಡೋರ ಯುವ ಸೇನೆ ಪದಾಧಿಕಾರಿಗಳು ದಿಢೀರನೆ ತಾಪಂ ಕಚೇರಿ ಮುಖ್ಯ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ತಾಪಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಲಿತ ನೌಕರ ಪರಶುರಾಮ ಗುಡದಿನಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ದಲಿತ ನೌಕರನನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ. ತಾಪಂ ಕಚೇರಿ
ನೋಡಲ್‌ ಅಧಿಕಾರಿ ಮೇಲೆ ಜಿಪಂ ಉಪಾಧ್ಯಕ್ಷರು ಲಂಚ ಪಡೆದ ಆರೋಪ ಮಾಡಿದ್ದಾರೆ. ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಎ.ಕೆ. ಚಲವಾದಿ ಎಂಬ ದಲಿತ ಮಹಿಳೆಯ ಮೇಲೂ ಇದೇ ರೀತಿ ಆಪಾದನೆ ಮಾಡಿ ವರ್ಗಾವಣೆ ಮಾಡಲಾಯಿತು. ಇಂದು ಪರಶುರಾಮ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ತಾಪಂನಲ್ಲಿ ದಲಿತ ನೌಕರರ ಮೇಲೆ ಆರೋಪ ಮಾಡಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ದೂರಿದ್ದಾರೆ. ಕಚೇರಿಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದವರ ಮನವೊಲಿಕೆಗೆ ಪೊಲೀಸ್‌ ಅಧಿಕಾರಿಗಳು ಮುಂದಾದರು. ಆದರೆ ಪೊಲೀಸರ ಮಾತಿಗೆ ಬಗ್ಗದ ಪ್ರತಿಭಟನಾಕಾರರು ದಲಿತ ನೌಕರರ ವಿರುದ್ಧ ಆರೋಪ ಮಾಡಿರುವ ಜನ ಪ್ರತಿನಿಧಿ  ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಿದರೆ ಮಾತ್ರ ಪ್ರತಿಭಟನೆ ಹಿಂಪಡೆಯುವುದಾಗಿ ಪಟ್ಟು ಹಿಡಿದರು. ಪ್ರತಿಭಟನಾಕಾರರು ಶುಕ್ರವಾರ ಸಂಜೆ 4:30ಕ್ಕೆ ಏಕಾಏಕಿ ಕಚೇರಿಯ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದ ಕಾರಣ ದಿನನಿತ್ಯ ತಾಪಂ ಸಿಬ್ಬಂದಿಗಳು ಸಂಜೆ ಮನೆಗೆ ತೆರಳುವ ನೌಕರರು ಪರದಾಡಿದ್ದು ಕಂಡು ಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next