Advertisement

ಅಣ್ಣಾಮಲೈ ಸೇರಿ ಹತ್ತು ಐಪಿಎಸ್‌ ಅಧಿಕಾರಿಗಳ ವರ್ಗ

11:42 PM Jun 07, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೆ.ಅಣ್ಣಾಮಲೈ ಸೇರಿ 10 ಮಂದಿ ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

Advertisement

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಡಾ.ರೋಹಿಣಿ ಕಟೋಚ್‌, ಡಾ.ಚೇತನ್‌ಸಿಂಗ್‌ ರಾಥೋಡ್‌ (ರಾಮನಗರ ಎಸ್‌ಪಿ), ಬಿ. ರಮೇಶ್‌ (ಬಿಡಿಎ ಸ್ಪೆಷಲ್‌ ಟಾಸ್ಕ್ ಪೋರ್ಸ್‌ ಎಸ್‌ಪಿ), ಕಾರ್ತಿಕ್‌ ರೆಡ್ಡಿ (ಕೋಲಾರ ಎಸ್‌ಪಿ), ಧರ್ಮೇಂದ್ರ ಕಿಮಾರ್‌ ಮೀನಾ( ನಿಸ್ತಂತು ವಿಭಾಗ ಎಸ್‌ಪಿ) ಡೆಕ್ಕಾ ಕಿಶೋರ್‌ ಬಾಬು (ಐಎಸ್‌ಡಿ ಎಸ್‌ಪಿ), ಸಿ.ಬಿ.ವೇದಮೂರ್ತಿ (ರಾಯಚೂರು ಎಸ್‌ಪಿ),

ಡಾ.ಎ.ಎನ್‌. ಪ್ರಕಾಶ್‌ಗೌಡ (ಹಾಸನ ಎಸ್‌ಪಿ), ಎಚ್‌.ಡಿ ಆನಂದ್‌ ಕುಮಾರ್‌ (ಚಾಮರಾಜನಗರ ಎಸ್‌ಪಿ) ಅವರನ್ನು ವರ್ಗಾಯಿಸಲಾಗಿದೆ. ಪೊಲೀಸ್‌ ಸೇವೆಗೆ ರಾಜೀನಾಮೆ ನೀಡಿರುವ ಕೆ.ಅಣ್ಣಾಮಲೈ ಅವರಿಗೆ ಯಾವುದೇ ಸ್ಥಾನ ಸೂಚಿಸಿಲ್ಲ. ಅಣ್ಣಾಮಲೈ ಅವರ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next