Advertisement

ನೆರೆ ಪರಿಹಾರ ನಿಧಿಗೆ ಮಕ್ಕಳಿಂದ ನೆರವು ಹಸ್ತಾಂತರ

11:09 PM Sep 13, 2019 | Sriram |

ಮುಳ್ಳೇರಿಯ: ಅಡೂರು ಸರಕಾರಿ ಹೈ. ಸೆಕೆಂಡರಿ ಶಾಲೆಯಲ್ಲಿ ಓಣಂ ಹಬ್ಟಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ರಾಜ್ಯ ನೆರೆ ಪರಿಹಾರ ನಿ ಧಿಗೆ ಸಂಗ್ರಹಿಸಿದ ಮೊತ್ತವನ್ನು ಮಾವೇಲಿ(ಮಹಾಬಲಿ) ವೇಷ ಧರಿಸಿದ ರಾಮ್‌ ಹಾಗೂ ಸಹಪಾಠಿಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉದುಮ ಶಾಸಕ ಕೆ.ಕುಂಞಿರಾಮನ್‌ ಅವರಿಗೆ ಹಸ್ತಾಂತರಿಸಿ ಗಮನ ಸೆಳೆದರು.

ಕಾರಡ್ಕ ಬ್ಲಾಕ್‌ ಪಂಚಾಯತ್‌ ಉಪಾಧ್ಯಕ್ಷ ಸಿ.ಕೆ. ಕುಮಾರನ್‌, ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎ.ಚಂದ್ರಶೇಖರನ್‌, ದೇಲಂಪಾಡಿ ಗ್ರಾ.ಪಂ. ಸದಸ್ಯ ಕಮಲಾಕ್ಷ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೆ. ಹರೀಶ್‌, ಪ್ರಾಂಶುಪಾಲ ಪಿ. ಲಕ್ಷ್ಮಣನ್‌, ಮುಖ್ಯೋಪಾಧ್ಯಾಯ ಅನೀಸ್‌ ಜಿ. ಮೂಸಾನ್‌, ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಮುಹಮ್ಮದ್‌ ಹಾಜಿ, ಮಾತೃ ಸಮಿತಿ ಅಧ್ಯಕ್ಷೆ ಜಯಲಕ್ಷ್ಮೀ ಶಾಲಾ ನೌಕರ ಸಂಘದ ಕಾರ್ಯದರ್ಶಿ ರಾಮಚಂದ್ರ ಮಣಿಯಾಣಿ, ಹಿರಿಯ ಶಿಕ್ಷಕಿ ಪಿ.ಶಾರದಾ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next