Advertisement

ಸೆ.6ರಿಂದ ನಿರುದ್ಯೋಗಿ ಯುವಕರಿಗೆ ತರಬೇತಿ

04:19 PM Aug 30, 2020 | Suhan S |

ಯಾದಗಿರಿ: ಕಲ್ಯಾಣ ಕರ್ನಾಟಕದಲ್ಲಿ ಸ್ವಾವಲಂಬನೆ ಮೂಡಿಸಲು ಸೆ.6ರಿಂದ ಪ್ರತಿ ಜಿಲ್ಲೆಯಿಂದ 20 ನಿರುದ್ಯೋಗಿ ಪದವೀಧರ ಯುವಕರನ್ನು ಆಯ್ಕೆ ಮಾಡಿ 21 ದಿನಗಳ ಕಾಲ ಆಯಾ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದು ವಿಕಾಸ ಅಕಾಡೆಮಿ ಪ್ರಮುಖರು ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ ಅಕಾಡೆಮಿ ಸಂಚಾಲಕರ ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ದೇಶ ಕೃಷಿ ಪ್ರಧಾನವಾಗಿದೆ. ಗ್ರಾಮೀಣ ಜನರು ಪರಿಶ್ರಮದಿಂದ ಸ್ವಾವಲಂಬನೆ ಬದುಕು ರೂಪಿಸಿಕೊಂಡಾಗ ಮಾತ್ರ ಬದಲಾವಣೆ ಕಾಣಲು ಸಾಧ್ಯ. ಹಾಗಾಗಿ ಸೇಡಂನಲ್ಲಿ ಮತ್ತು ಕಲಬುರಗಿಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ-ನಗರ ಅಭಿವೃದ್ಧಿ, ಸಮಗ್ರ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಜಲ ಮತ್ತು ಆಧುನಿಕ ತಂತ್ರಜ್ಞಾನ ಬಳಕೆ, ಸ್ವ-ಉದ್ಯೋಗ, ಮಹಿಳೆ, ಮಕ್ಕಳು ಮತ್ತು ಸಂಸ್ಕೃತಿ, ಯುವ ಶಕ್ತಿ ಸದ್ಬಳಕೆ, ವೃತ್ತಿ ಶಿಕ್ಷಣಕ್ಕಾಗಿ ಸಮಾಲೋಚನೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತರಬೇತಿ ಆಯೋಜಿಸಲಾಗಿದೆ. ಬಳಿಕ ಯುವಕರು ತಮ್ಮ ಗ್ರಾಮ ಸೇರಿದಂತೆ ಇತರೆ ಭಾಗಗಳಲ್ಲಿ ಕೆಲಸ ಕಾರ್ಯ ಮಾಡುವುದರಿಂದ ಬದಲಾವಣೆ ಕಾಣುವ ನಿರೀಕ್ಷೆ ಹೊಂದಿದ್ದೇವೆ ಎಂಬ ಆಶಯ ವ್ಯಕ್ತಪಡಿಸಿದರು.

ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿ ಏನು ಕೆಲಸ ಮಾಡಬೇಕು ಎಂಬುವುದರ ಬಗ್ಗೆ ಚಿಂತನೆ ಮಾಡಿ ಕ್ರಿಯಾಯೋಜನೆ ರೂಪಿಸಲಾಗಿದೆ. ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಎಲ್ಲರ ಜೊತೆಗೂಡಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಪ್ರಸಕ್ತ ದಿನಗಳಲ್ಲಿ ನಮ್ಮ ರೈತರು ಕೃಷಿಯಲ್ಲಿ ಭೂಮಿಗೆ ಅತಿ ಹೆಚ್ಚು ರಾಸಾಯನಿಕ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದನ್ನು ಬಿಟ್ಟು ಗೋವು ಆಧಾರಿತ ಕೃಷಿ ಕಡೆಗೆ ರೈತರು ಒಲವು ತೋರಬೇಕು. ಕೋವಿಡ್ ವೈರಸ್‌ ಬಗ್ಗೆ ಜನರಲ್ಲಿ ಭಯ ಕಾಡುತ್ತಿದೆ. ಆಯುರ್ವೇದಲ್ಲಿ ತಿಳಿಸಿದಂತೆ ಶುಂಠಿ ಕಷಾಯವನ್ನು ನಿತ್ಯ ಬೆಳಗ್ಗೆ ಸೇವಿಸಿದಲ್ಲಿ ವೈರಸ್‌ ದುರ್ಬಲಗೊಳಿಸಬಹುದು ಎಂದರು.

ಜಿಪಂ ಮಾಜಿ ಸದಸ್ಯ ಶಾಂತರಡ್ಡಿ ದೇಸಾಯಿ, ಜಿಲ್ಲಾ ಸಂಚಾಲಕ ನೀಲಕಂಠರಾಯ ಮಾತನಾಡಿದರು. ಜಿಪಂ ಅಧ್ಯಕ್ಷ ಬಸಣ್ಣಗೌಡ ಯಡಿಯಾಪುರ, ವಿಕಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಸುರೇಶ ಸಜ್ಜನ್‌, ಎಚ್‌.ಸಿ. ಪಾಟೀಲ, ಲಲಿತಾ ಅನಪುರ, ಜಿ.ತಮ್ಮಣ್ಣ, ಭೀಮಣ್ಣಗೌಡ ಕ್ಯಾತನಾಳ, ವೀರಣ್ಣ ರ್ಯಾಕಾ, ಇಂದುಧರ ಶಿನ್ನೂರ, ಡಿ.ಸಿ. ಪಾಟೀಲ ಕೆಂಭಾವಿ ಇತರರು ಇದ್ದರು. ಸಭೆ ಆರಂಭದಲ್ಲಿ ಶುಕ್ರವಾರ ದೈವಾಧೀನರಾದ ವಿಶ್ವಕರ್ಮ ಸಮಾಜದ ಜಗದ್ಗುರು ಏಕದಂಡಗಿ ಮಠದ ಗುರುನಾಥೇಂದ್ರ ಸರಸ್ವತಿ ಸ್ವಾಮಿಗಳ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next