Advertisement

ಅಂಧ ವಿದ್ಯಾರ್ಥಿಗಳಿಗೆ ತರಬೇತಿ

02:20 AM Jul 11, 2017 | |

ಬೆಳ್ತಂಗಡಿ : ಅಂಧ ಚೇತನರನ್ನು  ಸಮಾಜದ ಆಸ್ತಿಯನ್ನಾಗಿಸುವ ಜವಾಬ್ದಾರಿ ಪ್ರತಿಯೊಬ್ಬನದ್ದು ಮತ್ತು ಸಂಘ ಸಂಸ್ಥೆ, ಸರಕಾರಗಳದ್ದು ಎಂದು ಸೇವಾಭಾರತಿಯ ಅಧ್ಯಕ್ಷ ಬಿ.ಕೃಷ್ಣಪ್ಪ ಗುಡಿಗಾರ್‌ ಹೇಳಿದರು.

Advertisement

ಅವರು ಧರ್ಮಸ್ಥಳ ಗ್ರಾಮದ ಕನ್ಯಾಡಿ ಸೇವಾನಿಕೇತನದಲ್ಲಿ ಸೇವಾಭಾರತಿ ಮತ್ತು ಸಕ್ಷಮ ಬೆಳ್ತಂಗಡಿ ಇವರ ಆಶ್ರಯದಲ್ಲಿ ನಡೆದ ಅಂಧ ವಿದ್ಯಾರ್ಥಿಗಳಿಗೆ ನಡೆದಾಡುವ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಕ್ಷಮ ಬೆಳ್ತಂಗಡಿಯ ಕಾರ್ಯದರ್ಶಿ ಚಂದನ್‌ ಗುಡಿಗಾರ್‌, ಬೆಳ್ತಂಗಡಿ ತಾಲೂಕು ಅಂಗವಿಕಲರ ಸಂಘದ ಅಧ್ಯಕ್ಷೆ ಅಂಜನಾದೇವಿ, ಸೇವಾಭಾರತಿಯ ಉಪಾಧ್ಯಕ್ಷ ರಾಘವೇಂದ್ರ ಬೆ„ಪಾಡಿತ್ತಾಯ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಮೊಬಿಲಿಟಿ ಟ್ರೆ„ನಿಂಗ್‌ ಸೆಂಟರ್‌ ಫಾರ್‌ ಬ್ಲೆ„ಂಡ್‌ನ‌ ಸೌಮ್ಯಾ ಭಾಗವಹಿಸಿದ್ದರು.ಸೇವಾಭಾರತಿ ಕಾರ್ಯದರ್ಶಿ ಕೆ. ವಿನಾಯಕ ರಾವ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next