Advertisement

ವರ್ಷಕ್ಕೆ 1 ಲಕ್ಷ ಮಂದಿಗೆ ತರಬೇತಿ ನೀಡಿ ವಿದೇಶದಲ್ಲಿ ಉದ್ಯೋಗಾವಕಾಶ: BSVT ಸಂತೋಷ್ ಕುಮಾರ್

11:41 AM Jul 11, 2024 | Team Udayavani |

ಬೆಂಗಳೂರು: “ವರ್ಷಕ್ಕೆ ಕನಿಷ್ಠ ಒಂದು ಲಕ್ಷ ಮಂದಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ವಿದೇಶಕ್ಕೆ ಕಳುಹಿಸುವುದು ನಮ್ಮ ಪ್ರಮುಖ ಗುರಿಯಾಗಿದೆ” ಎಂದು ‘ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​’ (BSVT) ಸಿಇಒ ಸಂತೋಷ್ ಕುಮಾರ್ ಹೇಳಿದರು.

Advertisement

ಭಾರತದ ಮೊದಲ ಸಂಸ್ಥೆ ‘ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​’ನ ಬೆಂಗಳೂರಿನ ಮೊಟ್ಟಮೊದಲ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬುಧವಾರ ಬೆಂಗಳೂರಿನ ಲಲಿತ್​ ಅಶೋಕ್ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಈ ತರಬೇತಿ ಕೇಂದ್ರದ ವಿವಿಧ ಕೋರ್ಸ್​ಗಳಿಗೆ ಚಾಲನೆ ನೀಡಲಾಯಿತು. ಕಾರ್ಮಿಕ ಸಚಿವ ಸಂತೋಷ್ ಲಾಡ್​, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಂತಿ ನಗರ ಶಾಸಕ ಎನ್.ಎ.ಹ್ಯಾರಿಸ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಕರ್ನಾಟಕ ರಾಜ್ಯ, ಖಾತರಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಮೆಹ್ರೋಜ್ ಖಾನ್ ಉಪಸ್ಥಿತರಿದ್ದರು. ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​ ಟ್ರೈನಿಂಗ್ ಪ್ರೈವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಮುಷ್ತಾಕ್ ಅತಿಥಿಗಳನ್ನು ಸ್ವಾಗತಿಸಿದರು.

ಬಿಎಸ್​ವಿಟಿ ಸಿಇಒ ಸಂತೋಷ್ ಕುಮಾರ್ “ಶಿಕ್ಷಣ ಮತ್ತು ತರಬೇತಿಯ ಮೂಲಕ ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವುದು ಬಿಎಸ್​ವಿಟಿ ಸ್ಥಾಪನೆಯ ಮೂಲ ಉದ್ದೇಶ. ನಮ್ಮ ವಿದ್ಯಾರ್ಥಿಗಳಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಮತ್ತು ಸಾಧ್ಯವಾದಷ್ಟು ಉತ್ತಮ ವೃತ್ತಿ ಅವಕಾಶಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ವಿಶಿಷ್ಟ ಪಠ್ಯಕ್ರಮ ಮತ್ತು ಬಲವಾದ ಉದ್ಯಮ ಸಂಬಂಧಗಳೊಂದಿಗೆ, ವರ್ಟಿಕಲ್​ ಟ್ರಾನ್​​ಪೋರ್ಟೇಷನ್​ನಲ್ಲಿ ಮುಂದಿನ ಪೀಳಿಗೆಯ ನಾಯಕರು ಮತ್ತು ಪರಿಣತರನ್ನು ಸೃಷ್ಟಿಸುವುದು ನಮ್ಮ ಧ್ಯೇಯ ಎಂದು ಹೇಳಿದರು.

ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​ (ಎಲಿವೇಟರ್​ಗಳು) ಉದ್ಯಮದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಶೇಷ ಕೋರ್ಸ್​ಗಳನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ. ಇದರೊಂದಿಗೆ ಬಿಎಸ್ ವಿಟಿ ಈ ಕ್ಷೇತ್ರದಲ್ಲಿ ಹೊಸ ಮಾನದಂಡ ಸ್ಥಾಪಿಸುವ ಗುರಿ ಹೊಂದಿದೆ.

Advertisement

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ವರ್ಟಿಕಲ್ ಟ್ರಾನ್ಸ್‌ಪೋರ್ಟೇಷನ್‌ ನಲ್ಲಿ ಡಿಪ್ಲೋಮಾ ಕೋರ್ಸ್ ಒದಗಿಸುತ್ತಿರುವುದು ದೇಶದಲ್ಲಿ ಇದೇ ಮೊದಲು. ಈ ನಿಟ್ಟಿನಲ್ಲಿ ಬಿಎಸ್‌ವಿಟಿ ಪ್ರಮುಖ ಹೆಜ್ಜೆಯಿಟ್ಟಿರುವುದು ಸಂತೋಷದ ಸಂಗತಿ. ಈ ಉದ್ಯಮದೊಳಗಿನ ಕೌಶಲ್ಯದ ಕೊರತೆಯನ್ನು ನೀಗಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ ಪ್ರತಿ ವರ್ಷ 10 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿ ಮುಗಿಸಿ ಹೊರಬರುತ್ತಾರೆ. ಈ ಪೈಕಿ 5 ಲಕ್ಷ ಮಂದಿ ಪಿಯುಸಿಗೆ ಹೋಗುತ್ತಾರೆ. ಅದರಲ್ಲಿ 3 ಲಕ್ಷ ಮಂದಿ ಮಾತ್ರ ಪದವಿ, ಸ್ನಾತಕೋತ್ತರದಂಥ ಉನ್ನತ ಶಿಕ್ಷಣದತ್ತ ಮುಖ ಮಾಡುತ್ತಾರೆ. ಎಸ್ಸೆಸ್ಸೆಲ್ಸಿ ಮುಗಿಸಿದ ಉಳಿದ 7 ಲಕ್ಷ ಮಂದಿಗೆ ಅತ್ಯುತ್ತಮ ತರಬೇತಿ ನೀಡಿ, ಅವರನ್ನು ಕೌಶಲ್ಯಯುತರನ್ನಾಗಿಸುವತ್ತ ಗಮನ ಹರಿಸುವ ಕೆಲಸ ಆಗಬೇಕಿದೆ. ಬಿಎಸ್‌ವಿಟಿಯಂಥ ಸಂಸ್ಥೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಇಂಥ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು. ಅಲ್ಲದೆ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೂ ಈ ಸಂಸ್ಥೆಯಲ್ಲಿ ಕೌಶಲ್ಯ ತರಬೇತಿ ನೀಡಿದರೆ, ಅಂಥ ವಿದ್ಯಾರ್ಥಿಗಳನ್ನು ಸರ್ಕಾರದ “ಆಶಾದೀಪ ಯೋಜನೆ” (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ)ಯ ವ್ಯಾಪ್ತಿಗೆ ತಂದು, ಅವರಿಗೆ ಸರ್ಕಾರದ ವತಿಯಿಂದಲೇ ಸ್ಟೈಪಂಡ್ ಒದಗಿಸುತ್ತೇವೆ ಎಂಬ ಭರವಸೆಯನ್ನೂ ಅವರು ನೀಡಿದರು.

ಬಿಎಸ್​ವಿಟಿ ನೀಡುವ ಕೋರ್ಸ್‌ಗಳು:  ಬಿಎಸ್​ವಿಟಿ ವರ್ಟಿಕಲ್​ ಟ್ರಾನ್ಸ್​ಪೋರ್ಟ್​ ಉದ್ಯಮಕ್ಕೆ ಅನುಗುಣವಾಗಿ ಹಲವು ಬಗೆಯ ಕೋರ್ಸ್​ಗಳನ್ನು ನೀಡುತ್ತಿದೆ. ಅವುಗಳೆಂದರೆ, ಡಿಪ್ಲೊಮಾ ಇನ್ ವರ್ಟಿಕಲ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ, ಅಪ್​ಸ್ಕಿಲಿಂಗ್ ಪ್ರೋಗ್ರಾಂ ಇನ್​ ವರ್ಟಿಕಲ್​ ಟ್ರಾನ್ಸ್​​ಪೋರ್ಟೇಷನ್​ – ಮೆಂಟೇನೆನ್ಸ್​, ಅಪ್​ಸ್ಕಿಲಿಂಗ್ ಪ್ರೋಗ್ರಾಂ ಇನ್​ ವರ್ಟಿಕಲ್​ ಟ್ರಾನ್ಸ್‌​ಪೋರ್ಟೇಷನ್- ಟೆಸ್ಟಿಂಗ್ ಕಮಿಷನಿಂಗ್​, ಅಡ್ವಾನ್ಸ್​ಡ್​ ಕೋರ್ಸ್​ ಇನ್​ ಲಿಫ್ಟ್ ಇನ್​​ಸ್ಟಾಲೇಷನ್​, ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​- ಮಾಡರ್ನನೈಸೇಷನ್​ ಪ್ರೋಗ್ರಾಂ, ಸೇಫ್ಟಿ ಕಾಂಪ್ಲೈಯನ್ಸ್​​ ಇನ್​ ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​, ರೆಸ್ಕ್ಯೂ ಆಪರೇಷನ್ ಟ್ರೈನಿಂಗ್ ಪ್ರೋಗ್ರಾಂ.

ಸಂಪರ್ಕ ಮಾಹಿತಿ:

ಬಿಎಸ್​ವಿಟಿ ಮತ್ತು ಅದರ ಕೋರ್ಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು www.bharathsvt.com ಗೆ ಭೇಟಿ ನೀಡಿ ಅಥವಾ ಹೈಪರ್ ಲಿಂಕ್ “mailto:info@bharathsvt.com” ಅನ್ನು ಸಂಪರ್ಕಿಸಿ ಅಥವಾ ಸಂಪರ್ಕಿಸಿ ಅಥವಾ info@bharathsvt.com.

Advertisement

Udayavani is now on Telegram. Click here to join our channel and stay updated with the latest news.

Next