Advertisement

Trainee doctor ಅತ್ಯಾ*ಚಾರ, ಕೊ*ಲೆ ಕೇಸು: ಸಿಎಂ ಮಮತಾ ರಾಜೀನಾಮೆ ಅಸ್ತ್ರ!

01:33 AM Sep 13, 2024 | Team Udayavani |

ಕೋಲ್ಕತಾ: ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ ಸಂಬಂಧ ವ್ಯಾಪಕ ಪ್ರತಿಭಟನೆ ಮುಂದುವರಿದಿರುವಂತೆಯೇ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗ “ರಾಜೀನಾಮೆ ಅಸ್ತ್ರ’ ಪ್ರಯೋಗಿಸಿದ್ದಾರೆ. ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕಾಗಿ ನಾನು ರಾಜೀನಾಮೆ ನೀಡಲೂ ಸಿದ್ಧ ಎಂದು ಗುರುವಾರ ಘೋಷಿಸಿದ್ದಾರೆ.

Advertisement

ಈ ಪ್ರಕರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿದ್ದು ಅವರಿಗೆ ನ್ಯಾಯ ಬೇಕಿಲ್ಲ, ಅಧಿಕಾರ ಬೇಕಿದೆ. ನಾನು ಸಿಎಂ ಸ್ಥಾನದಿಂದ ಇಳಿದರೆ ನ್ಯಾಯ ಸಿಗುವುದಾದರೆ ಅದಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಇದೇ ವೇಳೆ ಗುರುವಾರ ಸಂಜೆ ಪ್ರತಿಭಟನನಿರತ ವೈದ್ಯರೊಂದಿಗೆ ಮಾತುಕತೆ ನಡೆಸಲೆಂದು ಸರಕಾರ ಸಭೆ ಕರೆದಿತ್ತು. ಸಭಾಂಗಣದಲ್ಲಿ ಸುಮಾರು 2 ಗಂಟೆಗಳ ಕಾಲ ಕಾದರೂ ಒಬ್ಬರೂ ಬರಲಿಲ್ಲ ಎಂದು ಸಿಎಂ ಮಮತಾ ಆರೋಪಿಸಿದ್ದಾರೆ.

ಅನುಮಾನಾಸ್ಪದ ಚೀಲ ಪತ್ತೆ: ಆರ್‌.ಜಿ. ಕಾರ್‌ ಆಸ್ಪತ್ರೆ ಎದುರು ಸಂಶಯಾಸ್ಪದ ಬ್ಯಾಗ್‌ ಪತ್ತೆಯಾಗಿತ್ತು. ಪ್ರತಿಭಟನ ಸ್ಥಳದಲ್ಲೇ ಈ ಬ್ಯಾಗ್‌ ಇದ್ದದ್ದು ಆತಂಕ ಮೂಡಿಸಿತ್ತು. ಸ್ಥಳಕ್ಕೆ ಧಾವಿ­ಸಿದ ಬಾಂಬ್‌ ನಿಷ್ಕ್ರಿಯ ದಳ ಆ ಚೀಲವನ್ನು ಪರಿಶೀಲಿಸಿದ್ದು, ಅಪಾಯಕಾರಿ ವಸ್ತು ಕಂಡುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next