Advertisement

ನಿಗದಿತ ಸಮಯಕ್ಕೆ ಬಾರದ ರೈಲು: ಪ್ರತಿಭಟನೆ

11:54 AM Jul 18, 2017 | Team Udayavani |

ಕೆ.ಆರ್‌.ಪುರ: ನಿಗದಿತ ಸಮಯಕ್ಕೆ ರೈಲು ಬಾರದ ಹಿನ್ನೆಲೆ ಅಕ್ರೋಶಗೊಂಡ ಪ್ರಯಾಣಿಕರು ಹೊಸೂರು – ಯಶವಂತಪುರ ರೈಲನ್ನು 2 ಗಂಟೆ ರಾಮಮೂರ್ತಿನಗರ ಸಮೀಪದ ಕಸ್ತೂರಿನಗರದಲ್ಲಿ ತಡೆದು ಪ್ರತಿಭಟನೆ ನಡೆಸಿದರು.

Advertisement

ಪ್ರತಿದಿನ ಹೊಸೂರು -ಯಶವಂತಪುರ ಮಾರ್ಗದಲ್ಲಿ ಸಂಚರಿಸುವ ರೈಲು ನಿಗದಿತ ಸಮಯಕ್ಕಿಂದ 1 ಗಂಟೆ ತಡವಾಗಿ ಆಗಮಿಸುತ್ತಿವೆ. ಇದರಿಂದ ಕೆಲಸಕ್ಕೆ ತೆರಳಲು ತೀವ್ರ ತೊಂದರೆ ಉಂಟಾಗುತ್ತಿದ್ದು ಆಕ್ರೋಶಗೊಂಡ ಪ್ರಯಾಣಿಕರು ರೈಲನ್ನು ತಡೆದು ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನಾ ಸ್ಥಳಕ್ಕೆ ಹಿರಿಯ ರೈಲ್ವೆ ಅಧಿಕಾರಿ ರಾಮಕೃಷ್ಣ  ಭೇಟಿ ನೀಡಿ ಮಾತನಾಡಿ, ಹೊಸೂರು-ಯಶವಂತಪುರ ಮಾರ್ಗಕ್ಕೆ ಒಂದೇ ರೈಲು ಸಂಚರಿಸುವುದರಿಂದ ಸಮಯದಲ್ಲಿ ವ್ಯತ್ಯಯವಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಮೇಲಾಧಿಕಾರಿಗಳು ಮತ್ತು ಪ್ರಯಾಣಿಕರೊಂದಿಗೆ  ಚರ್ಚಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.

ನಂತರ ಪ್ರಯಾಣಿಕರು ಪ್ರತಿಭಟನೆಯನ್ನು ಹಿಂಪಡೆದರು. 2 ಗಂಟೆಗಳ ಕಾಲ ರೈಲನ್ನು ತಡೆದಿದ್ದರಿಂದ  ಕೆಲ ರೈಲುಗಳ ಸಮಯದಲ್ಲಿ ವ್ಯತ್ಯಯ ಉಂಟಾಗಿ ನೂರಾರು ಪ್ರಯಾಣಿಕರಿಗೆ ತೊಂದರೆ ಉಂಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next