Advertisement

Train ಮಣ್ಣು ಕುಸಿತ: ಇಂದು ಮಂಗಳೂರು – ಮುಂಬಯಿ ರೈಲು ಸೇವೆ ರದ್ದು

12:44 AM Jul 11, 2024 | Team Udayavani |

ಉಡುಪಿ: ಗೋವಾದ ಕೊಂಕಣ ರೈಲ್ವೇ ಹಳಿ ಮೇಲೆ ಮಣ್ಣು ಕುಸಿದಿರುವ ಪರಿಣಾಮ ಜು.10ರಂದು ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಾಸವಾಗಿದೆ.

Advertisement

ಜು.11ರಂದು ಮಂಗಳೂರಿನಿಂದ ಮುಂಬಯಿಗೆ ಸಂಚರಿಸಬೇಕಿದ್ದ 12134 ಸಂಖ್ಯೆಯ ರೈಲು ಸೇವೆಯನ್ನು ರದ್ದು ಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.

ಕೊಂಕಣ ರೈಲು ಮಾರ್ಗದಲ್ಲಿ ಗೋವಾದಿಂದ ಮುಂಬಯಿ ಕಡೆ ಸಂಚರಿಸುವ ಹಾಗೂ ಮುಂಬಯಿಂದ ಗೋವಾ ಮಾರ್ಗವಾಗಿ ಉಡುಪಿ, ಮಂಗಳೂರಿಗೆ ಬರುವ ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಿದೆ. ಆದರೆ ಜು.10ರಂದು ರಾತ್ರಿ 8.35ಕ್ಕೆ ಎಲ್ಲ ಹಳಿಗಳನ್ನು ಸುಸ್ಥಿತಿಗೆ ತಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಕೊಂಕಣ ರೈಲ್ವೇ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next