Advertisement

Train; ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ; ನೀಲೇಶ್ವರದಲ್ಲಿ ತಾಸು ಕಾಲ ಉಳಿದ ರೈಲು

02:02 AM Feb 01, 2024 | Team Udayavani |

ಕಾಸರಗೋಡು: ನಿಜಾಮುದ್ದೀನ್‌ – ಎರ್ನಾಕುಳಂ ಮಂಗಳಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧಗಂಟೆ ನೀಲೇಶ್ವರದಲ್ಲಿ ನಿಲುಗಡೆಗೊಳಿಸಲಾ ಯಿತು. ಜ. 31ರಂದು ಬೆಳಗ್ಗೆ 8 ಗಂಟೆಗೆ ಘಟನೆ ಸಂಭವಿಸಿದೆ.

Advertisement

ರೈಲಿನ ಎಸ್‌ 5ನೇ ಬೋಗಿಯ ಅಡಿ ಭಾಗದಲ್ಲಿ ಬೆಂಕಿ ಕಾಣಿಸಿದ ಬಳಿಕ ಹೊಗೆ ಕಂಡು ಬಂದಿದೆ. ನಿಲ್ದಾಣದಲ್ಲಿದ್ದ ಪ್ರಯಾಣಿಕೆಯೊಬ್ಬರು ರೈಲ್ವೇ ಸ್ಟೇಶನ್‌ ಮಾಸ್ಟರ್‌ಗೆ ಮಾಹಿತಿ ನೀಡಿದ್ದು, ಕೂಡಲೇ ಲೋಕೋ ಪೈಲಟ್‌ಗೆ ಮಾಹಿತಿ ನೀಡಲಾ ಯಿತು. ಬಳಿಕ ಬೆಂಕಿ ಆರಿಸಿದ ಬಳಿಕ ರೈಲು ಸಂಚಾರ ಮುಂದು ವರಿಯಿತು.

ಬ್ರೇಕ್‌ನಿಂದ ಹೊಗೆ ಉಂಟಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next