Advertisement

ತೊಕ್ಕೊಟ್ಟು ರೈಲ್ವೆ ಹಳಿ ದಾಟುತ್ತಿದ್ದವರಿಗೆ ರೈಲು ಢಿಕ್ಕಿ, ಓರ್ವ ಸಾವು ಇನ್ನೋರ್ವ ಗಂಭೀರ

10:06 AM Oct 18, 2019 | sudhir |

ಮಂಗಳೂರು : ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭ ರೈಲು ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ತೊಕ್ಕೊಟ್ಟಿನಲ್ಲಿ ಗುರುವಾರ ಸಂಜೆ ಸಂಭವಿಸಿದೆ.

Advertisement

ಹಾವೇರಿ ಜಿಲ್ಲೆ,ಆನೇಕಲ್ಲು ಹುಣಸಿ ಗ್ರಾಮದವರಾದ ಸುಭಾಷ್(24) ಮೃತ ದುರ್ದೈವಿ ಅದೇ ಗ್ರಾಮದ ಮಂಜುನಾಥ್(26)ಗಂಭಿರ ಗಾಯಗೊಂಡ ವ್ಯಕ್ತಿ.

ಗುರುವಾರ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಜೋರಾಗಿ ಸುರಿದ ಮಳೆ ಜೊತೆಗೆ ಗುಡುಗು,ಮಿಂಚಿಗೆ ಗಾಬರಿಗೊಂಡ ಇಬ್ಬರು ರೈಲ್ವೆ ಹಳಿ ದಾಟಿದ್ದಾರೆ ಈ ಸಂದರ್ಭ ರೈಲು ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಸುಭಾಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಗಂಭೀರ ಗಾಯಗೊಂಡ ಮಂಜುನಾಥ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ರೈಲ್ವೇ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next