Advertisement

ಕಾಸರಗೋಡು: ಹೊಳೆಯಲ್ಲಿ ಮುಳುಗಿ ಇಬ್ಬರ ಸಾವು

06:01 PM Sep 29, 2022 | Team Udayavani |

ಕಾಸರಗೋಡು: ಬೋವಿಕ್ಕಾನ ಸಮೀಪ ಪಯಸ್ವಿನಿ ಹೊಳೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವಿಗೀಡ ಘಟನೆ ಬುಧವಾರ ಸಂಜೆ ಸಂಭವಿಸಿದೆ.

Advertisement

ಕೊಲ್ಲಂ ಚೆರಕರ ನಿವಾಸಿ ವಿ. ವಿಜಿತ್‌ (23) ಮತ್ತು ತಿರುವನಂತಪುರ ಕಡಯ್ನಾವೂರ ಕೊಟ್ಟಪುರಂ ವೀಟಿಲ್‌ನ ಆರ್‌. ರಂಜು (24) ಮೃತಪಟ್ಟವರು.

ಕಾಸರಗೋಡಿನ ಕೊಳತ್ತೂರು ಕಲ್ಲಾಯಿಯ ಕೆ. ಶ್ರೀವಿಷ್ಣು ಅವರ ಸ್ನೇಹಿತರಾಗಿರುವ ವಿಜಿತ್‌ ಮತ್ತು ರಂಜು ಅವರು ಪರವನಡ್ಕ ಮಣಿಯಂಗಾನದ ಸಿ. ವಿಷ್ಣು, ತಿರುವನಂತಪುರ ಪಳ್ಳಿಕ್ಕಾಡ್‌ ಕಡವಿಲ್‌ ವೀಟಿಲ್‌ ಎಸ್‌. ವೈಶಾಕ್‌ ಮತ್ತು ಕುಂಬಳೆ ಕೊರಂಙಾಲ ವೀಟಿಲ್‌ ಅಬ್ದುಲ್‌ ಖಾದರ್‌ ಸಿನಾನ್‌ ಅವರೊಂದಿಗೆ ಮನೆಗೆ ಬಂದಿದ್ದರು. ಸಂಜೆ ವೇಳೆಗೆ ಸ್ನೇಹಿತರು ಮಹಾಲಕ್ಷ್ಮೀಪುರ ತೂಗು ಸೇತುವೆ ಸಮೀಪ ನದಿಗೆ ಸ್ನಾನಕ್ಕಿಳಿದಿದ್ದರು. ಕರಿಚ್ಚೇರಿ ಹೊಳೆ ಮತ್ತು ಪಯಸ್ವಿನಿ ಹೊಳೆಗಳು ಸಂಗಮಿಸುವ ಸ್ಥಳವಾಗಿದ್ದು ನೀರಿನ ಸೆಳೆತ ಅಧಿಕವಿತ್ತು. ಸ್ನಾನ ಮಾಡುತ್ತಿದ್ದ ವಿಜಿತ್‌, ರಂಜು, ಶ್ರೀವಿಷ್ಣು ಮತ್ತು ಸಿ. ವಿಷ್ಣು ನೀರಿನ ಸೆಳೆತಕ್ಕೆ ಸಿಲುಕಿದರು. ಜತೆಯಲ್ಲಿದ್ದವರು ಬೊಬ್ಬೆ ಹಾಕಿದಾಗ ಸ್ಥಳೀಯರು ಧಾವಿಸಿ ಬಂದರಾದರೂ ವಿಜಿತ್‌ ಮತ್ತು ರಂಜು ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಗೋವಾ ಪ್ರವಾಸದ ಬೆನ್ನಲ್ಲೇ ದುರಂತ:

ಅಬ್ದುಲ್‌ ಖಾದರ್‌ ಹೊರತುಪಡಿಸಿ ಐವರು ಗೋವಾ ಪ್ರವಾಸಗೈದು ಕಾಸರಗೋಡಿಗೆ ಮರಳಿದ್ದರು. ಅನಂತರ ಈ ಆರು ಮಂದಿ ರಾಣಿಪುರ ಪ್ರವಾಸಿ ಕೇಂದ್ರವನ್ನು ಸಂದರ್ಶಿಸಿ ಶ್ರೀವಿಷ್ಣುವಿನ ಮನೆಗೆ ಬಂದವರು ಸಮೀಪದಲ್ಲೇ ಇರುವ ಹೊಳೆಯತ್ತ ಹೋಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next