Advertisement

ಹುಣಸೂರು: ವರ್ಷದ ಹಿಂದೆ ಮನೆ ತೊರೆದಿದ್ದ ಯುವ ಪ್ರೇಮಿಗಳು ನೇಣಿಗೆ ಶರಣು

12:26 PM Feb 23, 2022 | Team Udayavani |

ಹುಣಸೂರು: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ,ಮನೆ ತೊರೆದಿದ್ದ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಸಿಂಗರಮಾರನಹಳ್ಳಿಯಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ  ಸಿಂಗರಮಾರನಹಳ್ಳಿ ಗ್ರಾಮದ ಕುಮಾರ್ ರವರ  ಪುತ್ರಿ ಅರ್ಚನಾ (17)  ಹಾಗೂ  ಇದೇ ಗ್ರಾಮದ ವಿಜಯಕುಮಾರ್ ಪುತ್ರ ರಾಕೇಶ್ (24) ನೇಣಿಗೆ ಶರಣಾದ ಪ್ರೇಮಿಗಳು.

ಪುತ್ರಿ ಅರ್ಚನಾ ಕಾಣೆಯಾಗಿರುವ ಬಗ್ಗೆ ತಂದೆ ಕುಮಾರ್ ಬಿಳಿಕೆರೆ ಠಾಣೆಯಲ್ಲಿ 23/9/2021 ರಂದು ದೂರು ನೀಡಿದ್ದರು. ಇತ್ತ ತಮ್ಮ ಪುತ್ರ ಕಾಣೆಯಾಗಿದ್ದಾರೆಂದು ವಾರದ ನಂತರ 29/9/2021 ರಂದು ವಿಜಯಕುಮಾರ್ ಸಹ ದೂರು ‌ನೀಡಿದ್ದರು.ಈವರೆಗೂ ಪತ್ತೆಯಾಗಿರಲಿಲ್ಲ.

ನಿನ್ನೆ ರಾತ್ರಿ  ಗ್ರಾಮಕ್ಕೆ ಬಂದಿದ್ದ ಪ್ರೇಮಿಗಳು ಊರಿನ  ಹೊರವಲಯದ ಜಮೀನಿನಲ್ಲಿರುವ ಹಲಸಿನಮರಕ್ಕೆ ಇಬ್ಬರೂ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಬಿಳಿಕೆರೆ ಠಾಣೆ ಎಸ್.ಐ. ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next