Advertisement

ಹುಣಸೂರು: ಜೀವನದಲ್ಲಿ ಜಿಗುಪ್ಸೆ ಮಹಿಳೆ ನೇಣಿಗೆ ಶರಣು

06:37 AM Feb 20, 2022 | Team Udayavani |

ಹುಣಸೂರು: ಜೀವನದಲ್ಲಿ ಜಿಗುಪ್ಸೆಕೊಂಡಿದ್ದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ನಡೆದಿದೆ.

Advertisement

ನಗರದ ನ್ಯೂ ಮಾರುತಿ ಬಡಾವಣೆಯ ರಾಧಮ್ಮರವರ ಪುತ್ರಿ ಕವಿತಾ(35) ಜೀವನದಲ್ಲಿ ಜಿಗುಪ್ಸೆಗೊಂಡು ಶನಿವಾರ ಮುಂಜಾನೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತನ್ನ ಸಹೋದರಿ 35 ವರ್ಷವಾದರೂ ಮದುವೆಯಾಗಿಲ್ಲವೆಂದು ಮನನೊಂದಿದ್ದ ಕವಿತಾ ಮಾನಸಿಕ ಚಿಂತನೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮುಂಜಾನೆ ಮನೆಯಲ್ಲಿ ವೇಲ್‌ನಿಂದ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಗರ ಪೋಲಿಸ್ ಠಾಣೆಯಲ್ಲಿ ಕವಿತಾರ ಸಹೋದರಿ ಪ್ರಕರಣ ದಾಖಲಿಸಿದ್ದಾರೆ.  ಸಾರ್ವಜನಿಕ ಅಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ  ನಡೆಸಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next