Advertisement

ಠಾಣೆ ಮುಂದೆಯೇ ದುರಂತ: ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಲಾರಿ; ಬಾಲಕಿ ಸಾವು

03:36 PM Mar 21, 2022 | Team Udayavani |

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಢಿಕ್ಕಿಯಾಗಿ ಶಾಲಾ ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಹಬ್ಬಾಳದಲ್ಲಿ ಸೋಮವಾರ (ಮಾರ್ಚ್ 21)  ಮಧ್ಯಾಹ್ನ ನಡೆದಿದೆ.

Advertisement

ಮೃತಳನ್ನುಅಕ್ಷಯಾ (14)  ಎಂದು ಗುರುತಿಸಲಾಗಿದೆ. ರವಿವಾರ ಸುರಿದ ಮಳೆಯಿಂದ ಹೆಬ್ಬಾಳ ಠಾಣಾ ಮುಂದಿರುವ ಅಂಡರ್ ಪಾಸ್ ನಲ್ಲಿ ನೀರು ತುಂಬಿ ನಿಂತಿತ್ತು. ಹೀಗಾಗಿ ಸಾರ್ವಜನಿಕರು ಮುಖ್ಯ ರಸ್ತೆಯಿಂದಲೇ ರಸ್ತೆ ದಾಟಬೇಕಿತ್ತು.

ಅಕ್ಷಯಾ ರಸ್ತೆ ದಾಟಲು ಇತರರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಪಾದಚಾರಿಗಳ ಮೇಲೆ ಹರಿದಿದೆ. ಪರಿಣಾಮ ಬಾಲಕಿ ಅಕ್ಷಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.  ಘಟನೆಯಲ್ಲಿ ಇತರ 8 ಮಂದಿಗೆ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರ್ ಟಿ ನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next