Advertisement

ಹನೂರು: ತಾಯಿಯ ಅಗಲಿಕೆಯ ನೋವಿನ ನಡುವೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿ

04:04 PM Apr 11, 2022 | Team Udayavani |

ಹನೂರು: ತಾಯಿಯ ಅಗಲಿಕೆಯ ನಡುವೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾದ ಪ್ರಸಂಗ ಹನೂರು ಪಟ್ಟಣದಲ್ಲಿ ಜರುಗಿದೆ.

Advertisement

ಹನೂರು ಪಟ್ಟಣದ ಮಾರಿಗುಡಿ ಬೀದಿಯ ವಿದ್ಯಾರ್ಥಿ ಸಂಜಯ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಯಾಗಿದ್ದಾನೆ.

ಈತ ನಾರಾಯಣ್ ಮತ್ತು ಆಶಾರಾಣಿಯವರ ಪುತ್ರನಾಗಿದ್ದಾನೆ. ಸಂಜಯ್‍ರ ತಾಯಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಸೋಮವಾರ ಮುಂಜಾನೆ ಅಸುನೀಗಿದ್ದಾರೆ. ಆದರೆ ಮೃತರ ಪುತ್ರ ಸಂಜಯ್‍ಗೆ ಇಂದು ಎಸ್‍ಎಸ್‍ಎಲ್‍ಸಿಯ ಅಂತಿಮ ವಿಷಯವಾದ ವಿಜ್ಞಾನ ಪರೀಕ್ಷೆಯಿತ್ತು. ತಾಯಿಯ ಅಗಲಿಕೆಯ ನಡುವೆಯೂ ಸಂಜಯ್ ಕ್ರಿಸ್ತರಾಜ ವಿದ್ಯಾಸಂಸ್ಥೆಯ ಕೇಂದ್ರಕ್ಕೆ ಬಂದು ಪರೀಕ್ಷೆಗೆ ಹಾಜರಾಗಿದ್ದನು.

ಇದನ್ನೂ ಓದಿ:ಪ್ರತ್ಯೇಕತಾವಾದಿಗಳು, ಉಗ್ರರ ಜತೆ ನಂಟು; ಖಾಸಗಿ ಕಾನೂನು ಕಾಲೇಜಿನ ಪ್ರಾಂಶುಪಾಲ ವಜಾ

ಪರೀಕ್ಷೆ ಮುಕ್ತಾಯವಾದ ಬಳಿಕ ವಿದ್ಯಾರ್ಥಿ ಸಂಜಯ್ ಆಗಮಿಸಿ ತಾಯಿಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದನು. ಈ ಘಟನೆ ಹನೂರು ಪಟ್ಟಣವಾಸಿಗಳನ್ನು ಕಂಬನಿ ಮಿಡಿಯುವಂತೆ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next