Advertisement

ಗ್ರಾ.ಪಂ. ಅಧ್ಯಕ್ಷರ ಕೊಠಡಿಯಲ್ಲೇ‌ ವಾಟರಮನ್ ನೇಣಿಗೆ ಶರಣು

11:23 AM Sep 29, 2021 | Team Udayavani |

ಗದಗ: ಗ್ರಾ.ಪಂ. ಅಧ್ಯಕ್ಷರ ಕೊಠಡಿಯಲ್ಲೇ ಪಂಚಾಯತ್  ವಾಟರ್ ಮೆನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಮಲ್ಲಪ್ಪ ಪೂಜಾರಿ (33) ನೇಣಿಗೆ ಶರಣಾದ ವಾಟರ್ ಮೆನ್.

ಇದನ್ನೂ ಓದಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,870 ಕೋವಿಡ್ ಪ್ರಕರಣ ಪತ್ತೆ, 378 ಮಂದಿ ಸಾವು

ಇತ್ತೀಚಿಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಗ್ರಾ.ಪಂ. ಆಡಳಿತ ಮಂಡಳಿ ಮಲ್ಲಪ್ಪ ನನ್ನು ಎರಡು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದು ಹಾಕಿತ್ತು. ಇದರಿಂದ ಮನನೊಂದು ಗ್ರಾ.ಪಂ. ಅಧ್ಯಕ್ಷರ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಘಟನೆ ಹಿನ್ನೆಲೆಯಲ್ಲಿ ಮುಂಡರಗಿ ಠಾಣಾ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ, ಪರಿಶೀಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next