Advertisement

‘ಬೀದಿ ಸುತ್ತುವ ಬದಲು ಕೆಲಸಕ್ಕೆ ಹೋಗು’ಎಂದ ಪೋಷಕರ ಮಾತಿಗೆ ನೊಂದು ನೇಣಿಗೆ ಶರಣಾನಾದ ಮಗ

01:46 PM Mar 14, 2022 | Team Udayavani |

ಬೆಂಗಳೂರು: ನಗರದ ಎರಡು ಪ್ರತ್ಯೇಕ ಪ್ರಕರಣ ಗಳಲ್ಲಿ ಯುವಕ ಸೇರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಸುಂಕದಕಟ್ಟೆಯ ಶ್ರೀನಿವಾಸ ನಗರದ ಪೈಪ್‌ ಲೈನ್‌ ರಸ್ತೆ ನಿವಾಸಿ ಸಂಜಯ್‌ (22) ಮೃತ ಯುವಕ.

ಪಿಯುಸಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ ಸಂಜಯ್‌, ಸ್ನೇಹಿತರ ಜತೆ ಅಲಿಯುತ್ತಿದ್ದ. ಕಳೆದ ಮೂರು ದಿನಗಳಿಂದ ಮನೆಗೂ ಬಾರದೆ ಸ್ನೇಹತರ ಜತೆಯಲ್ಲಿಯೇ ಅಲೆ ದಾಡುತ್ತಿದ್ದ. ಶನಿವಾರ ಮನೆಗೆ ಬಂದಿದ್ದಾನೆ. ಆಗ ಕೋಪಗೊಂಡ ತಂದೆ-ತಾಯಿ ಹಾಗೂ ಸಂಬಂಧಿಕರು ಒಳ್ಳೆಯವರ ಸ್ನೇಹ ಮಾಡು. ಯಾವುದಾದರೂ ಕೆಲಸಕ್ಕೆ ಹೋಗುವಂತೆ ಬೈದಿದ್ದಾರೆ. ಅದಕ್ಕೆ ಬೇಸರಗೊಂಡ ಸಂಜಯ್‌, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೃದ್ಧ ಸಾವು: ಮತ್ತೂಂದು ಪ್ರಕರಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಮನನೊಂದು ವೃದ್ಧರೊಬ್ಬರು ತಮ್ಮ ಮನೆ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೀವನಭೀಮ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೀವನ್‌ ಭೀಮಾನಗರ ನಿವಾಸಿ ಕೋದಂಡರಾಮ ವೆಂಕಟ (70) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಮೃತರು ಪುತ್ರ ಮತ್ತು ಸೊಸೆ ಜತೆ ಜೀವನ್‌ ಭೀಮಾನಗರದಲ್ಲಿ ವಾಸವಾಗಿ ದ್ದರು. ಪುತ್ರ ಮತ್ತು ಸೊಸೆ ತಮ್ಮ ಮಕ್ಕಳನ್ನು ಕೋದಂಡರಾಮ ಬಳಿ ಊರಿಗೆ ತೆರಳಿದ್ದರು. ಈ ವೇಳೆ ಶನಿವಾರ ಮಧ್ಯರಾತ್ರಿ ಮನೆ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next