Advertisement

ಥೈಯ್ಲೆಂಡ್‌ನಿಂದ ಬೆಂಗಳೂರಿಗೆ ಮದ್ಯ ಪೂರೈಸುತ್ತಿದ್ದ ಮೂವರು ಅಂದ‌ರ್‌

10:59 AM Oct 16, 2023 | Team Udayavani |

ಬೆಂಗಳೂರು: ಥೈಯ್ಲೆಂಡ್‌ನಿಂದ ಕಡಿಮೆ ಬೆಲೆಗೆ ಮದ್ಯದ ಬಾಟಲಿ, ಐ-ಫೋನ್‌, ಚಿನ್ನಾಭರಣ ಖರೀದಿಸಿ ಅಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತಂದು ಹೆಚ್ಚಿನ ಬೆಲೆಗೆ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಸಿಸಿಬಿ ಬಲೆಗೆ ಬಿದ್ದಿದ್ದಾರೆ.

Advertisement

ಉಲ್ಲಾಳದ ಆರ್‌. ವರದರಾಜ್‌ (52), ಶ್ರೀನಿವಾಸ್‌ (61) ಹಾಗೂ ನಾಗೇಶ್‌ (44) ಬಂಧಿತರು. ಬಂಧಿತರಿಂದ ವಿದೇಶಿ ಕಂಪನಿಗಳ 21 ಮದ್ಯದ ಬಾಟಲಿಗಳು, 17 ಐ-ಫೋನ್‌, 8 ಚಿನ್ನದ ಉಂಗುರ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಥೈಯ್ಲೆಂಡ್‌ನಿಂದ ಕಡಿಮೆ ಬೆಲೆಗೆ ಮದ್ಯದ ಬಾಟಲಿ, ಐ-ಫೋನ್‌, ಚಿನ್ನಾಭರಣ ಖರೀದಿಸುತ್ತಿದ್ದರು. ವಿಮಾನ ಮಾರ್ಗದಲ್ಲಿ ಅಕ್ರಮವಾಗಿ ಬೆಂಗಳೂರಿಗೆ ತರುತ್ತಿದ್ದರು. ಕಸ್ಟಮ್ಸ್‌ ಅಧಿಕಾರಿಗಳ ಕಣ್ತಪ್ಪಿಸಿ ಹಲವು ವಸ್ತುಗಳನ್ನು ಸಾಗಿಸುತ್ತಿದ್ದರು. ನಂತರ ಪರಿಚಿತರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಥೈಯ್ಲೆಂಡ್‌ನಿಂದ ಬಟ್ಟೆಗಳ ಬ್ಯಾಗ್‌ಗಳಲ್ಲಿ ಈ ವಸ್ತುಗಳನ್ನು ಬಚ್ಚಿಟ್ಟುಕೊಂಡು ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದು, ವಿಮಾನ ನಿಲ್ದಾಣದಿಂದ ಹೊರಗೆ ಬಂದಿದ್ದರು.ಟರ್ಮಿನಲ್‌ -2ರಲ್ಲಿ ವಾಹನ ಪಾರ್ಕಿಂಗ್‌ ಜಾಗದಲ್ಲಿ ಆರೋಪಿಗಳಿರುವ ಬಗ್ಗೆ ಸಿಸಿಬಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next