ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.
Advertisement
ಚಾರ್ಮಾಡಿ ಘಾಟ್ ಭಾಗದ ಅಣ್ಣಪ್ಪ ಸ್ವಾಮಿ ದೇವಸ್ಥಾನ ಸಮೀಪ ಕಿರಿದಾದ ರಸ್ತೆಯಿದ್ದು, ವೇಗದಿಂದ ಬರುವ ವಾಹನಗಳು ಮುಂಭಾಗದಿಂದ ಬರುವ ವಾಹನಗಳು ಕಾಣಿಸದೇ ತೊಂದರೆ ಅನುಭವಿಸುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡ 11ನೇ ತಿರುವಿನ ಎದುರು ಕಡಿದಾದ ಬಂಡೆ ರಸ್ತೆಗೆ ಸಮೀಪವಾಗಿದ್ದು, ವೇಗದಿಂದ ವಾಹನಗಳು ಬಂದರೆ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲು ಸಾಧ್ಯವಾಗದೇ ಹಿಂದೆ ಮುಂದೆ ವಾಹನಗಳನ್ನು ಮುನ್ನಡೆಸುವಾಗ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ. ಅಲ್ಲದೇ ಶಿರಾಡಿ ಘಾಟನಲ್ಲಿ ಓಡಾಡುವ ಚಾಲಕರಿಗೆ ಚಾರ್ಮಾಡಿ ಘಾಟಿಯ ರಸ್ತೆಯ ಪರಿಚಯ ಇಲ್ಲದಿರುವುದರಿಂದ ಅವರ ಚಾಲನಾಶೈಲಿಯಿಂದಲೂ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ. ಕೊಟ್ಟಿಗೆಹಾರ ಭಾಗದಲ್ಲಿ ಪ್ರತಿ ಶನಿವಾರ, ಭಾನುವಾರ ಸಾಮಾನ್ಯ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರೆ ಈಗ ಶಿರಾಡಿ ಘಾಟ್ ಬಂದಾದ ಕೂಡಲೇ ಇನ್ನೂ ಹೆಚ್ಚಿನ ವಾಹನಗಳಿಂದ ಸಂಚಾರ ದಟ್ಟನೆಉಂಟಾಗುತ್ತಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ನಂತರ ಪೊಲೀಸರು ಭಾರೀ ಸರಕು ಸಾಗಾಟದ ಲಾರಿಗಳನ್ನು ಹೋಗಲು ಬಿಡದೇ ವಾಪಾಸ್ ಬದಲಿ ರಸ್ತೆಯಲ್ಲಿ ಚಲಿಸುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿದೆ.
ನಿಂದಲೇ ನಿಯಂತ್ರಿಸಿದರೆ ಚಾರ್ಮಾಡಿ ಘಾಟ್ ಸಂಚಾರಕ್ಕೆ ಮುಕ್ತವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಸಂಚಾರ ದಟ್ಟನೆ ಉಂಟಾಗದಂತೆ ಘನ ವಾಹನಗಳನ್ನು ಬದಲಿ ರಸ್ತೆಯಿಂದ ಚಲಿಸಲು ಸೂಚನೆ ನೀಡುವುದು ಉತ್ತಮ ಎಂದು ಈ ವೇಳೆ ಪ್ರವಾಸಿಯೊಬ್ಬರ ಅಭಿಪ್ರಾಯಪಟ್ಟರು. ನಾಗೇಶ್ ಹೆಬ್ಟಾರ್