Advertisement
ಸಂಚಾರ ನಿಯಮ ಉಲ್ಲಂಘನೆ ಕುರಿತು ವಾಹನ ಮಾಲೀಕರಿಗೆ ಎಸ್ಎಂಎಸ್ ಮೂಲಕ ಮಾಹಿತಿ ಕಳುಹಿಸುವ ಪ್ರಕ್ರಿಯೆ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ನೂತನ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ವಿಭಾಗ ಜಂಟಿ ಆಯುಕ್ತ ಡಾ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.
Related Articles
Advertisement
ಈ ರೀತಿ ನಿತ್ಯ 20 ಸಾವಿರ ಸಂಪರ್ಕ ರಹಿತ ವ್ಯವಸ್ಥೆಯಲ್ಲಿ ಸಂಚಾರಿ ನಿಯಮ ಉಲ್ಲಂಘನೆ ನೋಟಿಸ್ಗಳನ್ನು ಹೊರಡಿಸಲಾಗುತ್ತಿತ್ತು. ನೋಟಿಸ್ಗಳನ್ನು ತಯಾರಿಸಲು, ಮುದ್ರಿಸಲು ಮತ್ತು ಅವುಗಳನ್ನು ರವಾನಿಸಲು ಪೊಲೀಸರು ಅಂಚೆ ಇಲಾಖೆಯ ಸಿಬ್ಬಂದಿ ಶ್ರಮ ವ್ಯಯವಾಗುತಿತ್ತು. ಜತೆಗೆ 4.50 ರೂ. ವೆಚ್ಚ ತಗುಲುತ್ತಿದೆ.
ಜತೆಗೆ ಮಾನವ ಸಂಪನ್ಮೂಲ ಕೂಡ ಬಳಕೆಯಾಗುತ್ತಿದೆ. ಬಹು ತೇಕ ಪ್ರಕರಣಗಳಲ್ಲಿ ಮಾಲೀಕರು ವಿಳಾಸ ಬದ ಲಾಯಿಸಿದರೆ ನೋಟಿಸ್ಗಳು ವಾಪಸ್ ಬಂದು, ಅದಕ್ಕೆ ತಗುಲಿದ ವೆಚ್ಚ ಮತ್ತು ಶ್ರಮ ವ್ಯಯವಾಗುತಿತ್ತು. ದಂಡ ಪಾವತಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗುತ್ತಿದ್ದು, ದಂಡ ಪಾವತಿಯ ಲಿಂಕ್ಗಳನ್ನು ಎಸ್ಎಂಎಸ್ ಒಳಗೊಂಡಿರುತ್ತದೆ.
ಸಂದೇಶ ಕಳುಹಿಸಲು 20 ಪೈಸೆ ವೆಚ್ಚ ತಗುಲತ್ತದೆ ಎಂದು ಡಾ ಬಿ.ಆರ್.ರವಿಕಾಂತೇಗೌಡ ತಿಳಿಸಿ ದ್ದಾರೆ. ತಕ್ಷಣವೇ ಎಸ್ಎಂಎಸ್ ತಲುಪುವು ದರಿಂದ ವಾಹನ ಮಾಲೀಕರು ಎಚ್ಚೆತ್ತುಕೊಂಡು ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲಿ ¨ªಾರೆ. ಬೇರೆಯವರು ವಾಹನ ಚಲಾಯಿಸುತ್ತಿದ್ದಾಗ ಸಂಚಾರ ನಿಯಮ ಉಲ್ಲಂಘನೆ ಯಾಗಿದ್ದರೆ ಅದರ ಮಾಲೀಕರಿಗೆ ಸಂದೇಶ ಹೋಗಿ ತಪ್ಪುಗಳನ್ನು ಸರಿಪಡಿಸಲು ಈ ವ್ಯವಸ್ಥೆ ಅನುಕೂಲವಾಗಲಿದೆ ಎಂದರು.
ಮೊಬೈಲ್ಗೆ ಸಂದೇಶ
ಸಾರಿಗೆ ಇಲಾಖೆ ವಾಹನಗಳ ನೋಂದಣಿ ಜತೆಗೆ ಸಂಬಂಧಿತ ಮಾಲೀಕರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿದೆ. ಈ ನಂಬರ್ ಗಳನ್ನು ಸಾರಿಗೆ ಇಲಾಖೆ ಬೆಂಗಳೂರು ಪೊಲೀಸರ ಜತೆ ಹಂಚಿಕೊಳ್ಳುತ್ತದೆ.
ಈ ಮಾಹಿತಿ ಆಧರಿಸಿ ಇನ್ಮುಂದೆ ಯಾವುದೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಗಳು ದಾಖಲಾದರೆ, ಕೆಲ ಹೊತ್ತಿನಲ್ಲಿಯೇ ಅದರ ಮಾಲೀಕರಿಗೆ ನೋಟಿಸ್ ಸಂಖ್ಯೆ, ನೋಂದಣಿ ಸಂಖ್ಯೆ, ದಿನಾಂಕ-ಸಮಯ ಮತ್ತು ದಂಡದ ಮೊತ್ತ ಒಳಗೊಂಡ ಎಸ್ ಎಂಎಸ್ ಅನ್ನು ನೋಂದಾ ಯಿತ ಮೊಬೈಲ್ ಸಂಖ್ಯೆಗೆ ರವಾನಿಸಲಾಗುತ್ತದೆ.