Advertisement

ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಬಳಿ ರಸ್ತೆತಡೆ: ಮಸ್ತಿ ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆ

02:08 PM Aug 08, 2021 | Team Udayavani |

ಚಿಕ್ಕಮಗಳೂರು: ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಕಾಂಗ್ರೆಸ್ ಕಾರ್ಯಕರ್ತರು, ಪ್ರಗತಿಪರರು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದ ಪರಿಣಾಮ ವೀಕೆಂಡ್ ಮಸ್ತಿ ಮಾಡಲು ಬಂದ ಪ್ರವಾಸಿಗರು ನಿರಾಸೆ ಅನುಭವಿಸುವಂತಾಗಿದೆ.

Advertisement

ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು, ಮುಳ್ಳಯ್ಯನಗಿರಿ, ದತ್ತಪೀಠ ಪ್ರದೇಶಗಳಿಗೆ ಹೋಗದಂತೆ ಪ್ರವಾಸಿಗರಿಗೆ ತಡೆ ಮಾಡಿದರು. 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡುವಂತೆ ಪಟ್ಟು ಹಿಡಿದರು. ಎಲ್ಲಾ ಪ್ರವಾಸಿಗರ ಕೊವೀಡ್ ರಿಪೋರ್ಟ್ ನೋಡಿ ಬಿಡುವಂತೆ ಸಿಬ್ಬಂದಿಗೆ ಆಗ್ರಹ ಮಾಡಿದರು.

ಇದನ್ನೂ ಓದಿ:ನೀರಜ್ ಚೋಪ್ರಾಗೆ ತರಬೇತಿ ನೀಡಿದ ಕಾಶಿನಾಥ್ ನಾಯ್ಕ್ ಗೆ10 ಲಕ್ಷ ರೂ. ಘೋಷಿಸಿದ ಕ್ರೀಡಾ ಸಚಿವರು

ರಸ್ತೆತಡೆ ಮಾಡಿದ ಹಿನ್ನೆಲೆಯಲ್ಲಿ ಎರಡು ಕಿಲೋಮೀಟರ್ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು. ವೀಕೆಂಡ್ ಮಸ್ತಿ ಮಾಡಲು ಬಂದ ಪ್ರವಾಸಿಗರಿಗೆ ನಿರಾಸೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next