Advertisement

ಪೊಲೀಸ್‌ ಆಯುಕ್ತರಿಂದ ಸಂಚಾರ ಪರಿಶೀಲನೆ

11:01 PM Jun 28, 2019 | mahesh |

ಮಹಾನಗರ: ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಅವರು ನಗರದ ಸಂಚಾರ ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ ಶುಕ್ರವಾರ ಕಾವೂರು ಮತ್ತು ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Advertisement

ಫುಟ್ಪಾತ್‌ನಲ್ಲಿ ವಾಹನ ನಿಲುಗಡೆ, ಬಸ್‌ಬೇನಲ್ಲಿ ಬಸ್‌ ನಿಲ್ಲಿಸದೆ ಇರುವುದು, ಜಂಕ್ಷನ್‌ಗಳಲ್ಲಿ ಸಂಚಾರಿ ಪೊಲೀಸರಿಗೆ ಕೊಡೆ ಹಾಕದಿರುವ ಬಗ್ಗೆ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರವೇ ಕಮಿಷನರ್‌ ಕಾರ್ಯಾಚರಣೆಗೆ ಇಳಿದರು.

ಕಾವೂರಿಗೆ ಭೇಟಿ ನೀಡಿದ ಕಮಿಷನರ್‌ ಅವರು, ಕಡ್ಡಾಯವಾಗಿ ಬಸ್‌ ಬೇ ನಲ್ಲಿ ಬಸ್‌ಗಳನ್ನು ನಿಲ್ಲಿಸಲು ಕ್ರಮಕೈಗೊಳ್ಳ ಬೇಕು, ಫುಟ್ಪಾತ್‌ಗಳಲ್ಲಿ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿದರು. ರೈಲು ನಿಲ್ದಾಣದ ಮುತ್ತಪ್ಪ ಗುಡಿ ಬಳಿ ಟ್ರಾಫಿಕ್‌ ಅಂಬ್ರೆಲ್ಲಾ ಹಾಕುವಂತೆ ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸ್‌ಡಿಪಿಐ ಪ್ರತಿಭಟನೆಗೆ ಏರ್ಪಡಿಸಿದ್ದ ಬಂದೋ ಬಸ್ತು ವೀಕ್ಷಿಸಿದರು. ಸಿಟಿ ರೌಂಡಪ್‌ ವೇಳೆ ನಗರ ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಲಕ್ಷ್ಮೀಗಣೇಶ್‌, ಎಸಿಪಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next