Advertisement

Traffic awareness: ಸಂಚಾರ ಜಾಗೃತಿಗೆ ನಗರದಲ್ಲಿರಸ್ತೆಗಿಳಿದ ಯಮ, ಚಿತ್ರಗುಪ್ತ!

11:18 AM Jan 15, 2024 | Team Udayavani |

ಬೆಂಗಳೂರು: ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಯಮರಾಜ ಹಾಗೂ ಆತನ ಸಹಾಯಕ ಚಿತ್ರಗುಪ್ತ ವೇಷ ಧಾರಿಗಳ ಮೂಲಕ ಭಾನುವಾರ ನಗರ ದಲ್ಲಿ ಸಂಚಾರ ನಿಯಮಗಳ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.

Advertisement

ಮೈಸೂರು ಬ್ಯಾಂಕ್‌ ವೃತ್ತದಲ್ಲಿ ರಂಗಭೂಮಿ ಕಲಾವಿದರಾದ ನಾಗೇಂದ್ರ ಮತ್ತು ರಂಗನಾಥ್‌ ಅವರು ಯಮರಾಜ ಮತ್ತು ಚಿತ್ರಗುಪ್ತ ವೇಷ ಧರಿಸಿ ಸಂಚಾರ ನಿಯಮಗಳ ಬಗ್ಗೆ ನಾಟಕದ ಶೈಲಿಯಲ್ಲಿ ಡೈಲಾಗ್‌ ಹೇಳುತ್ತಾ ಅರಿವು ಮೂಡಿಸಿದರು.

“ಅತೀವೇಗ, ತಿಥಿ ಬೇಗ, ನಿಮಗಾಗಿ ಮನೆಯವರು ಕಾಯುತ್ತಿರುತ್ತಾರೆ. ಸಂಚಾರ ನಿಯಮ ಪಾಲಿಸಿದರೆ ಮನೆಗೆ ಹೋಗು ತ್ತೀರಿ. ಇಲ್ಲವಾದರೆ, ಯಮಲೋಕಕ್ಕೆ ಹೋಗುತ್ತೀರಾ’. “ವಾಹನ ಚಲಾಯಿಸುತ್ತಾ ಮೊಬೈಲ್‌ನಲ್ಲಿ ಕರೆ ಮಾಡಿದರೆ, ನೀವು ಯಮ ಲೋಕಕ್ಕೆ ಸಂಪರ್ಕ ಸಾಧಿಸುವಿರಿ’. ಎಂಬಿತ್ಯಾದಿ ನಾಟಕೀಯ ಶೈಲಿಯಲ್ಲಿ ಸಂಭಾಷಣೆ ಹೇಳುತ್ತಾ ವಾಹನ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಜತೆಗೆ ಅರ್ಧ ಹೆಲ್ಮೆಟ್‌ ಧರಿಸಬೇಡಿ, ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಧರಿಸಿ ಎಂದು ಸಂಚಾರ ಪೊಲೀ ಸರು ದ್ವಿಚಕ್ರ ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next