Advertisement

ಸಂಪ್ರದಾಯಬದ್ಧವಾಗಿ ಸಾಹಿತಿ ಚೆನ್ನಣ್ಣ ವಾಲೀಕಾರ ಅಂತ್ಯಕ್ರಿಯೆ

10:59 PM Nov 25, 2019 | Lakshmi GovindaRaj |

ವಾಡಿ: ಪ್ರಗತಿಪರ ಚಿಂತಕ, ನಾಡಿನ ಹಿರಿಯ ಬಂಡಾಯ ಸಾಹಿತಿ ಡಾ.ಚನ್ನಣ್ಣ ವಾಲೀಕಾರ ಅಂತ್ಯಕ್ರಿಯೆ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಸೋಮವಾರ ಸಂಜೆ ಸ್ವಗ್ರಾಮ ಚಿತ್ತಾಪುರ ತಾಲೂಕಿನ ಶಂಕರವಾಡಿಯ ಅವರ ಜಮೀನಿನಲ್ಲಿ ನೆರವೇರಿತು.

Advertisement

ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಚನ್ನಣ್ಣ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸಂಪ್ರದಾಯ ಮೀರಿ ಸಮಾಜಕ್ಕೆ ಪ್ರಗತಿಪರ ಚಿಂತನೆ ಬೋಧಿಸಿದ ಹಿರಿಯ ಸಾಹಿತಿಯ ಅಂತ್ಯಸಂಸ್ಕಾರ ಸಂಪ್ರದಾಯಬದ್ಧವಾಗಿ ನಡೆಯುತ್ತಿರುವುದನ್ನು ನೋಡಿ ಭಾಗವಹಿಸಿದ್ದ ಸಾಹಿತಿಗಳು, ಹೋರಾಟಗಾರರು, ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next