Advertisement

ಟ್ರ್ಯಾಕ್ಟರ್ ಹಾಗೂ ಬೈಕ್ ಢಿಕ್ಕಿ: ಬೈಕ್ ಸವಾರ ಸಾವು

09:57 AM Jan 25, 2022 | Team Udayavani |

ರಾಮದುರ್ಗ: ರಸ್ತೆಯಲ್ಲಿ ಹೋಗುತ್ತಿದ್ದ ಟ್ರ್ಯಾಕ್ಟರನ್ನು ಒವರ್‍ ಟೆಕ್ ಮಾಡಲು ಹೋದ ಬೈಕ್ ಸವಾರಿನಿಗೆ ಟ್ರ್ಯಾಕ್ಟರ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚುಂಚನೂರ ಗ್ರಾಮದಲ್ಲಿ ನಡೆದಿದೆ.

Advertisement

ಹಣಮಸಾಗರ ಗ್ರಾಮದ ಶಿವಪ್ಪ ಅಶೋಕ ಹಗೇದ (22) ಮೃತ ಪಟ್ಟ ದುರ್ದೈವಿ.

ಬೈಕ್ ಸವಾರ ಚುಂಚನೂರ ಗ್ರಾಮದಿಂದ ಹಣಮಸಾಗರ ಗ್ರಾಮಕ್ಕೆ ತೆರಳುತ್ತಿರುವ  ವೇಳೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಓವರಟೆಕ್ ಮಾಡಲು ಹೋದಾಗ ಟ್ರ್ಯಾಕ್ಟರ್, ಬೈಕ್‌ಗೆ ಢಿಕ್ಕಿಯಾಗಿ, ಸವಾರ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ರಾಮದುರ್ಗ ತಾಲೂಕಿನ ಕಟಕೋಳ ಪೋಲಿಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next