Advertisement

ಹಳಿ ನವೀಕರಣ ಕಾಮಗಾರಿ: ಮೇ 20-22ರವೆರೆಗೆ ಕೆಲವು ರೈಲು ರದ್ದು, ಕೆಲವು ಭಾಗಶಃ ರದ್ದು

11:06 PM May 16, 2023 | Team Udayavani |

ಮಂಗಳೂರು: ತಿರುವನಂತಪುರದ ಆಲುವ ಅಂಗಮಾಲಿ ಸೆಕ್ಷನ್‌ ಮಧ್ಯೆ ಹಳಿ ನವೀಕರಣ ಕಾಮಗಾರಿ ಇರುವುದರಿಂದ ಹಲವು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

Advertisement

ಮೇ 21ರಂದು ಹೊರಡಲಿರುವ ನಂ.12202 ಕೊಚ್ಚುವೇಲಿ-ಲೋಕಮಾನ್ಯ ತಿಲಕ್‌ ಗರೀಬರಥ, ಮೇ.22ರಂದು ಹೊರಡಲಿರುವ ನಂ.12201 ಲೋಕಮಾನ್ಯ ತಿಲಕ್‌-ಕೊಚ್ಚುವೇಲಿ ಗರೀಬರಥ, ಮೇ.21ರಂದು ಹೊರಡಲಿರುವ 16650 ನಾಗರಕೋವಿಲ್‌-ಮಂಗಳೂರು ಸೆಂಟ್ರಲ್‌ ಪರಶುರಾಮ ಎಕ್ಸ್‌ಪ್ರೆಸ್‌, ಮೇ 20ರಂದು ಹೊರಡುವ ನಂ.16649 ಮಂಗಳೂರು ಸೆಂಟ್ರಲ್‌-ನಾಗರಕೋವಿಲ್‌ ಪರಶುರಾಮ ಎಕ್ಸ್‌ಪ್ರೆಸ್‌ ಪೂರ್ಣ ರದ್ದಾಗಲಿದೆ.

ಮೇ 21ರಂದು ಹೊರಡುವ ನಂ.12617 ಎರ್ನಾಕುಳಂ ಜಂಕ್ಷನ್‌ ಹಜ್ರತ್‌ ನಿಜಾಮುದ್ದೀನ್‌ ಮಂಗಳಾ ಎಕ್ಸ್‌ಪ್ರೆಸ್‌ ಎರ್ನಾಕುಳಂ ಹಾಗೂ ತ್ರಿಶೂರು ಮಧ್ಯೆ ಭಾಗಶಃ ರದ್ದು. ಮೇ 21ರಂದು ತಿರುವನಂತಪುರಂನಿಂದ ಬೆಳಗ್ಗೆ 9.15ಕ್ಕೆ ಹೊರಡಬೇಕಾದ ನಂ.16346 ತಿರುವನಂತಪುರಂ ಸೆಂಟ್ರಲ್‌-ಲೋಕಮಾನ್ಯ ತಿಲಕ್‌ ನೇತ್ರಾವತಿ ಎಕ್ಸ್‌ಪ್ರೆಸ್‌ 3 ಗಂಟೆ ತಡವಾಗಿ 12.15ಕ್ಕೆ ಹೊರಡಲಿದೆ. ಕೊಚ್ಚುವೇಲಿಯಿಂದ ಮೇ 21ರಂದು ಬೆಳಗ್ಗೆ 11.10ಕ್ಕೆ ಹೊರಡಬೇಕಾದ ನಂ. 2909 ಕೊಚ್ಚುವೇಲಿ-ಪೋರಬಂದರ್‌ ಎಕ್ಸ್‌ಪ್ರೆಸ್‌ 1.35 ಗಂಟೆ ತಡವಾಗಿ 12.45ಕ್ಕೆ ಹೊರಡಲಿದೆ.

ಮೇ 22ರಂದು ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.25ಕ್ಕೆ ಹೊರಡಬೇಕಾದ ನಂ.16348 ಮಂಗಳೂರು ಸೆಂಟ್ರಲ್‌-ತಿರುವನಂತಪುರಂ ಸೆಂಟ್ರಲ್‌ ಡೈಲಿ ಎಕ್ಸ್‌ಪ್ರೆಸ್‌ 4.15 ಗಂಟೆ ತಡವಾಗಿ ಸಂಜೆ 6.40ಕ್ಕೆ ಹೊರಡಲಿದೆ. ಮೇ 22ರಂದು ಮಂಗಳೂರು ಸೆಂಟ್ರಲ್‌ನಿಂದ ಸಂಜೆ 5.30ಕ್ಕೆ ಹೊರಡಬೇಕಾದ ನಂ. 16603 ಮಂಗಳೂರು ಸೆಂಟ್ರಲ್‌-ತಿರುವನಂತಪುರ ಮಾವೇಲಿ ಎಕ್ಸ್‌ಪ್ರೆಸ್‌ ರಾತ್ರಿ 7.45ಕ್ಕೆ ಹೊರಡಲಿದೆ.

ಮೇ21ರಂದು ನಂ.16331 ಮುಂಬಯಿ ಸಿಎಸ್‌ಎಂಟಿ-ತಿರುವನಂತಪುರ ರೈಲನ್ನು 1.15 ಗಂಟೆ ಕಾಲ, ಮೇ 22ರಂದು ನಂ. 16630 ಮಂಗಳೂರು ಸೆಂಟ್ರಲ್‌-ತಿರುವನಂತಪುರಂ ಸೆಂಟ್ರಲ್‌ ಮಲಬಾರ್‌ ಎಕ್ಸ್‌ಪ್ರೆಸ್‌ ರೈಲನ್ನು 15 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next