Advertisement

ಪಾಕ್‌ ಜತೆ ಮಾತುಕತೆ

08:50 AM May 02, 2018 | Karthik A |

ಇಸ್ಲಾಮಾಬಾದ್‌ : ಭಾರತ ಮತ್ತು ಪಾಕಿಸ್ಥಾನ ನಡುವೆ ಸದ್ಯ ಹಳಸಿ ಹೋಗಿರುವ ರಾಜತಾಂತ್ರಿಕ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಅದಕ್ಕಾಗಿ ವಿದೇಶಾಂಗ ಖಾತೆ ಮಾಜಿ ಕಾರ್ಯದರ್ಶಿ ವಿವೇಕ್‌ ಕಾಟ್ಜು, ಖ್ಯಾತ ಶಿಕ್ಷಣ ತಜ್ಞ ಜೆ.ಎಸ್‌. ರಜಪೂತ್‌ ಮತ್ತು ಇತರರು ಎ.28ರಿಂದ 30ರವರೆಗೆ  ಇಸ್ಲಾಮಾಬಾದ್‌ಗೆ ಭೇಟಿ ನೀಡಿ, ಅಲ್ಲಿನ ವಿದೇಶಾಂಗ ಖಾತೆ ಮಾಜಿ ಕಾರ್ಯದರ್ಶಿ ಇನಾಮುಲ್‌ ಹುಸೇನ್‌ ನೇತೃತ್ವದ ನಿಯೋಗದ ಜತೆ ಮಾತುಕತೆ ನಡೆಸಿದ್ದಾರೆ. ಎರಡನೇ ಹಂತದ ರಾಜತಾಂತ್ರಿಕ ಮಾತುಕತೆ ಎಂದು ಇದನ್ನು  ಕರೆಯಲಾಗಿದ್ದು, ವಿವಾದ ಬಗೆಹರಿಸಲು ಪ್ರಯತ್ನಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next