Advertisement

ನಿತ್ಯನ ವಿರುದ್ಧ ಸಿಬಿಐ ತನಿಖೆಯಾಗಲಿ

09:35 AM Nov 28, 2019 | Team Udayavani |

ಹೊಸದಿಲ್ಲಿ: ಕರ್ನಾಟಕದ ಬಿಡದಿಯಲ್ಲಿರುವ ವಿವಾದಿತ ಸ್ವಾಮಿ ನಿತ್ಯಾನಂದ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಎಂಬ ಆಗ್ರಹ ಕೇಳಿ ಬಂದಿದೆ. ನಿತ್ಯಾನಂದನ ಬೆಂಗಳೂರು ಆಶ್ರಮದಲ್ಲಿ ಸಂಶಯಾಸ್ಪದವಾಗಿ ಅಸುನೀಗಿದ್ದ ಸಂಗೀತಾ ಎಂಬುವರ ತಾಯಿ ಒತ್ತಾಯ ಮಾಡಿದ್ದಾರೆ.

Advertisement

ಗುಜರಾತ್‌ ಝಾನ್ಸಿ ರಾಣಿಯ ಎಂಬುವರ ಪುತ್ರಿ 2010ರಲ್ಲಿ ನಿತ್ಯಾನಂದನ ಆಶ್ರಮ ಸೇರಿದ್ದರು. 2014ರಲ್ಲಿ ಬೆಂಗಳೂರಿನ ಬಿಡದಿ ಬಳಿಯ ಆಶ್ರಮದ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆಶ್ರಮದ ವಕ್ತಾರರು, ಸಂಗೀತಾಳಿಗೆ ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಆದರೆ, ಆಕೆಯ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದರಿಂದ ಝಾನ್ಸಿ ಅವರು, ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದರು. ಈಗ, ದೇಶ ಬಿಟ್ಟ ಪರಾರಿಯಾಗಿರುವ ನಿತ್ಯಾನಂದನ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ, ತಮ್ಮ ಮಗಳ ಸಾವಿನ ಪ್ರಕರಣದ ಸಿಬಿಐ ತನಿಖೆಯಾಗಬೇಕೆಂದು ಅವರ ತಾಯಿ ಝಾನ್ಸಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next