Advertisement

ಅಂತಿಮ ಏಕದಿನ: ಟಾಸ್ ಗೆದ್ದ ಭಾರತ ಫೀಲ್ಡಿಂಗ್; ತಂಡದಲ್ಲಿ ಒಂದು ಬದಲಾವಣೆ

10:01 AM Dec 23, 2019 | Team Udayavani |

ಕಟಕ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಮಾಡುವ ನಿರ್ಣಯ ಮಾಡಿದೆ.

Advertisement

ವೇಗಿ ದೀಪಕ್ ಚಾಹರ್ ಬೆನ್ನು ನೋವಿಗೆ ಒಳಗಾಗಿ ತಂಡದಿಂದ ಹೊರಬಿದ್ದ ಹಿನ್ನಲೆಯಲ್ಲಿ ನವದೀಪ್ ಸೈನಿ ಏಕದಿನ ಪದಾರ್ಪಣೆಗೈದರು.

ಸರಣಿಯಲ್ಲಿ ಇದೇ ಮೊದಲ ಬಾರಿಗೆ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ರಾತ್ರಿಯ ವೇಳೆಗೆ ಇಬ್ಬನಿ ಬೀಳುವುದರಿಂದ ವಿರಾಟ್ ಈ ನಿರ್ಧಾರಕ್ಕೆ ಬಂದರು.

ಕಟಕ್ ನ ಬಾರಾಮತಿ ಅಂಗಳದಲ್ಲಿ ನಿರ್ಣಾಯಕ ಪಂದ್ಯ ನಡೆಯುತ್ತಿದ್ದು, ಈ ಪಂದ್ಯ ಗೆದ್ದವರು ಸರಣಿ ಜಯಿಸುತ್ತಾರೆ. ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದರೆ ಎರಡನೇ ಪಂದ್ಯವನ್ನು ಭಾರತ ಜಯಿಸಿತ್ತು.

ತಂಡಗಳು

Advertisement

ಭಾರತ: ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ನವದೀಪ್ ಸೈನಿ

ವೆಸ್ಟ್ ಇಂಡೀಸ್: ಇವಿನ್ ಲೂಯಿಸ್, ಶಾಯ್ ಹೋಪ್, ಶಿಮ್ರನ್ ಹೆಟ್ಮೈರ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಕೈರನ್ ಪೊಲಾರ್ಡ್, ಜೇಸನ್ ಹೋಲ್ಡರ್, ಕೀಮೋ ಪೌಲ್, ಅಲ್ಜಾರಿ ಜೋಸೆಫ್, ಖ್ಯಾರಿ ಪೀರೆ, ಶೆಲ್ಡನ್ ಕಾಟ್ರೆಲ್

Advertisement

Udayavani is now on Telegram. Click here to join our channel and stay updated with the latest news.

Next