Advertisement

ಬಾಂಗ್ಲಾ ಕ್ರಿಕೆಟಿಗರ ಬಂಡಾಯ ಬೆದರಿಕೆ

11:38 PM Oct 21, 2019 | mahesh |

ಢಾಕಾ: ಆಂತರಿಕ ವಿಷಯಗಳಿಂದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ವಿರುದ್ಧ ಸಿಡಿದೆದ್ದಿರುವ ಕ್ರಿಕೆಟಿಗರು 11 ಅಂಶಗಳ ಬೇಡಿಕೆಗಳನ್ನು ಪಟ್ಟಿ ಮಾಡಿ ಮಂಡಳಿ ಮುಂದಿಟ್ಟಿದ್ದಾರೆ. ಇದರಲ್ಲಿ ತಿಳಿಸಲಾಗಿರುವ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ ಕ್ರಿಕೆಟ್‌ ಮತ್ತು ಕ್ರಿಕೆಟಿಗರ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂಬರುವ ಎಲ್ಲ ಸರಣಿಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ. ಹೀಗಾಗಿ ಮುಂದಿನ ತಿಂಗಳ ಭಾರತ ಪ್ರವಾಸದಿಂದ ಬಾಂಗ್ಲಾ ತಂಡ ಹಿಂದಕ್ಕೆ ಸರಿಯುವ ಸಾಧ್ಯತೆಯೊಂದು ಗೋಚರಿಸಿದೆ.

Advertisement

ಕ್ರಿಕೆಟಿಗರ ಬೇಡಿಕೆ ಏನು?
ಕಳೆದ ತಿಂಗಳು ನಿಲ್ಲಿಸಿರುವ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ ಅನ್ನು ಮತ್ತೆ ಪುನರಾರಂಭಿಸಬೇಕು, ಕ್ರಿಕೆಟಿಗರ ಕಲ್ಯಾಣ ಸಂಸ್ಥೆಯಲ್ಲಿ ಈಗಿರುವ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು, ಬಾಂಗ್ಲಾ ಕ್ರಿಕೆಟ್‌ ಲೀಗ್‌ನಲ್ಲಿ ಸ್ಥಳೀಯ ಆಟಗಾರರ ಜತೆಗೆ ವಿದೇಶಿ ಆಟಗಾರರಿಗೂ ಹೆಚ್ಚಿನ ಅವಕಾಶ ಕಲ್ಪಿಸಬೇಕು, ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಈಗ ನೀಡುತ್ತಿರುವ ವೇತನ ತೀರ ಕಡಿಮೆಯಾಗಿದ್ದು ಕೂಡಲೇ ಹೆಚ್ಚಿಸಬೇಕು ಎನ್ನುವುದು ಪ್ರಮುಖ ಬೇಡಿಕೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next