Advertisement

ಟೂಲ್‌ಕಿಟ್‌ ರಚಿಸಿದ್ದೇ ದಿಶಾ, ನಿಕಿತಾ, ಶಂತನು! ಟೆಲಿಗ್ರಾಂ ಮೂಲಕ ಥನ್‌ಬರ್ಗ್‌ಗೆ ರವಾನೆ

12:39 AM Feb 16, 2021 | Team Udayavani |

ಹೊಸದಿಲ್ಲಿ: ಟೂಲ್‌ಕಿಟ್‌ ವಿವಾದಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಸೋಮವಾರ ಇನ್ನಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದು, ಬೆಂಗಳೂರಿನ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ, ಬಾಂಬೆ ಹೈಕೋರ್ಟ್‌ ವಕೀಲೆ ನಿಕಿತಾ ಜಾಕೋಬ್‌ ಮತ್ತು ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಶಂತನು ಎಂಬ ಮೂವರು ಸೇರಿ ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್‌ (ಕಿರುಹೊತ್ತಗೆ) ರಚಿಸಿದ್ದರು ಎಂದಿದ್ದಾರೆ.

Advertisement

ದಿಶಾ ಅವರೇ ರೈತರ ಪ್ರತಿಭಟನೆಗೆ ಹೇಗೆ ಬೆಂಬಲ ನೀಡಬೇಕು ಎಂಬ ವಿವರವಿದ್ದ ಟೂಲ್‌ ಕಿಟ್‌ ಅನ್ನು ಸ್ವೀಡನ್‌ನ ಹೋರಾಟಗಾರ್ತಿ ಗ್ರೆಟಾ ಥನ್‌ ಬರ್ಗ್‌ಗೆ ಟೆಲಿಗ್ರಾಂ ಆ್ಯಪ್‌ ಮೂಲಕ ರವಾನಿಸಿದ್ದರು. ಅದರಲ್ಲಿ ರೈತರ ಟ್ರ್ಯಾಕ್ಟರ್‌ ಪರೇಡ್‌ಗೂ ಮುನ್ನ “ಡಿಜಿಟಲ್‌ ಸ್ಟ್ರೆ „ಕ್‌’ (ರೈತರ ಪರ ಸರಣಿ ಟ್ವೀಟ್‌) ಮಾಡುವಂತೆಯೂ ಸೂಚಿಸ ಲಾಗಿತ್ತು. ಜತೆಗೆ ಟೂಲ್‌ಕಿಟ್‌ ಹಂಚಿಕೊಳ್ಳ ಲೆಂದು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ, ಅದನ್ನೀಗ ಡಿಲೀಟ್‌ ಮಾಡಿದ್ದಾರೆ ಎಂದು ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ದಿಲ್ಲಿ ಪೊಲೀಸ್‌ ಜಂಟಿ ಆಯುಕ್ತ (ಸೈಬರ್‌) ಪ್ರೇಮ್‌ನಾಥ್‌ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟೂಲ್‌ಕಿಟ್‌ ಹಂಚಿ ಕೊಂಡ ಮತ್ತಿಬ್ಬರು ಆರೋಪಿಗಳಾದ ನಿಕಿತಾ ಜಾಕೋಬ್‌ ಮತ್ತು ಶಂತನು ವಿರುದ್ಧ ಜಾಮೀನುರಹಿತ ವಾರಂಟ್‌ ಜಾರಿ ಮಾಡ ಲಾಗಿದೆ. ಖಲಿಸ್ಥಾನ್‌ ಪರ ಸಂಘಟನೆಯಾದ ಪೋಯೆಟಿಕ್‌ ಜಸ್ಟೀಸ್‌ ಫೌಂಡೇಶನ್‌ ಆಯೋಜಿ ಸಿದ್ದ ಝೂಮ್‌ ಸಭೆಯಲ್ಲೂ ನಿಕಿತಾ ಮತ್ತು ಶಂತನು ಪಾಲ್ಗೊಂಡಿದ್ದರು ಎಂದೂ ಪ್ರೇಮನಾಥ್‌ ತಿಳಿಸಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ
ತಮ್ಮ ವಿರುದ್ಧ ವಾರಂಟ್‌ ಜಾರಿಯಾ ಗುತ್ತಲೇ ವಕೀಲೆ ನಿಕಿತಾ ಜಾಕೋಬ್‌ ಸೋಮವಾರ ನಿರೀಕ್ಷಣ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವಾರಗಳ ಕಾಲ ನಿರೀಕ್ಷಣ ಜಾಮೀನು ನೀಡುವಂತೆ ಅವರು ಮನವಿ ಮಾಡಿದ್ದು, ಮಂಗಳವಾರ ಅರ್ಜಿಯ ವಿಚಾರಣೆ ನಡೆಯಲಿದೆ

Advertisement

Udayavani is now on Telegram. Click here to join our channel and stay updated with the latest news.

Next