Advertisement

ಬೆಳಗಾವಿ; ರಾಖಿ ಕಟ್ಟಿದ ಸಹೋದರಿಯರಿಗೆ ಶೌಚಾಲಯ ಗಿಫ್ಟ್!

03:47 PM Aug 07, 2017 | Team Udayavani |

ಬೆಳಗಾವಿ: ರಕ್ಷಾ ಬಂಧನ ಕಟ್ಟಿದ ಸಹೋದರಿಯರಿಗೆ ಹಣ ನೀಡುವ ಬದಲು ಶೌಚಾಲಯವನ್ನು ಉಡುಗೊರೆಯಾಗಿ ನೀಡುವ ಮೂಲಕ ಬೆಳಗಾವಿಯ ಸಹೋದರರು ರಕ್ಷಾ ಬಂಧನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

Advertisement

ಬೆಳಗಾವಿ ತಾಲೂಕಿನ ಹುಲ್ಯಾನೂರು ಗ್ರಾಮಸ್ಥರು ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಸಹೋದರಿಯರಿಗೆ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯವನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಹುಲ್ಯಾನೂರು ಗ್ರಾಮದಲ್ಲಿ ಸುಮಾರು 35 ಶೌಚಾಲಯಗಳನ್ನು ಸಹೋದರಿಯರಿಗೆ ಉಡುಗೊರೆ ರೂಪದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಅಧ್ಯಕ್ಷರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next