Advertisement

ಶೌಚಾಲಯದ ತುಂಬ ಕೊಳಚೆನೀರು ಮಹಿಳಾ ಪ್ರಯಾಣಿಕರಿಗೆ ತೊಂದರೆ

10:04 AM Nov 13, 2019 | Suhan S |

ಗಂಗಾವತಿ: ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸರಿಯಾದ ನಿರ್ವಹಣೆ ಇಲ್ಲದ ಇಡೀ ನಿಲ್ದಾಣ ಕಸ ಕಡ್ಡಿ ಶೌಚನೀರಿನಿಂದ ಕೂಡಿದೆ. ಪ್ರತಿದಿನ ಪುರುಷ ಮತ್ತು ಮಹಿಳಾ ಶೌಚಾಲಯದಲ್ಲಿ ಪ್ರಯಾಣಿಕರು ಬಿದ್ದು ಗಾಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.

Advertisement

ಇನ್ನೂ ಮಹಿಳಾ ಶೌಚಾಲಯದ ಮುಂದೆ ಕೊಳಚೆ ನೀರು ನಿಂತಿರುವುದರಿಂದ ಮಹಿಳೆಯರು ಶೌಚಕ್ಕೆ ಹೋಗಲು ಹರ ಸಾಹಸ ಪಡುವಂತಾಗಿದೆ. ಕಳೆದ ಎರಡು ತಿಂಗಳಿಂದ ಇಡೀ ನಿಲ್ದಾಣದಲ್ಲಿ ಕಲ್ಮಶ ನೀರು ಹರಿಯುತ್ತಿದ್ದರೂ ಡಿಪೋ ಮ್ಯಾನೇಜರ್ ಇತ್ತ ಕಡೆ ನೋಡಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕಳೆದ ಎರಡು ತಿಂಗಳಿಂದ ಕೇಂದ್ರ ಬಸ್ ನಿಲ್ದಾಣದಲ್ಲಿ ಕೊಳಚೆ ನೀರಿನ ತೊಂದರೆ ಇದ್ದರೂ ಸ್ಥಳೀಯ ಶಾಸಕರು ಸೇರಿ ಎಲ್ಲ ಜನಪ್ರತಿನಿಧಿಗಳು ನಿರ್ಲಕ್ಷ್ಯ ತಾಳಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next